UDUPI : ನಿಯಂತ್ರಣ ತಪ್ಪಿದ ಬೈಕ್ ; ಡಿವೈಡರ್ ‌ಗೆ ಢಿಕ್ಕಿ ಹೊಡೆದು ಸವಾರ ಗಂಭೀರ ಗಾಯ

ಬೈಕ್ ಸವಾರನೊಬ್ಬ‌ ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯದ ಡಿವೈಡರ್ ಗೆ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಬೈಂದೂರಿನ ರಾಷ್ಟ್ರೀಯ ಹೆದ್ದಾರಿ 66ರ ಒತ್ತಿನೆಣೆಯಲ್ಲಿ ನಡೆದಿದೆ. 
ಬೈಕ್ ಸವಾರ ಕುಮಟಾ ಮೂಲದ ಕರುಣಾಕರ ನಾಯ್ಜ್,  ಗಂಭೀರ ಗಾಯಗೊಂಡಿದ್ದು, ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಬೈಕ್ ಸವಾರ ಕರುಣಾಕರ ನಾಯ್ಕ್ ಕಾಲಿಗೆ ಹೆಚ್ಚಿನ ಗಾಯವಾಗಿದ್ದು,  ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..