STATE

UDUPI : ಭೀಕರ ಅಪಘಾತ : ಸಹೋದರರಿಬ್ಬರು ಸಾವು

ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಸಂಬಂಧಿಸಿದ ಭೀಕರ   ಅಪಘಾತದಲ್ಲಿ  ಸಹೋದರರಿಬ್ಬರು ಸಾವನ್ಪಿದ ಘಟನೆ ಉಡುಪಿಯ ನಂದಳಿಕೆಯ ಮಾವಿನಕಟ್ಟೆಯಲ್ಲಿ ಎಂಬಲ್ಲಿ ನಡೆದಿದೆ. ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಳಿಯ ನಿವಾಸಿಗಳಾದ ಸತೀಶ್ ಕುಲಾಲ್(28) ಹಾಗೂ ಸಂದೀಪ್  ಕುಲಾಲ್ 25  ಮೃತ ದುರ್ಧೈವಿಗಳು.
 ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದಾಗ,‌ಕಾರ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಇನೋವಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮೃತ ಪಟ್ಟಿದ್ದಾರೆ. ಸಂದೀಪ್ ಸ್ಥಳದಲ್ಲೇ ಮೃತ ಪಟ್ಟರೆ ಸತೀಶ ಆಸ್ಪತ್ರೆಯಲ್ಲಿ  ಮೃತಪಟ್ಟಿದ್ದಾರೆ. ಸಂದೀಪ್ ಅವಿವಾಹಿತರಾಗಿದ್ದು, ಸತೀಶ್ ಗೆ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು.
ಟ್ಯಾಗ್‌ಗಳು: STATE