-->

UDUPI ; ಪಶ್ಚಿಮ ಘಟ್ಟದದಲ್ಲಿ ಗಿಡ ನೆಡುವ ಅಭಿಯಾನ ; ಪರಿಸರ ಜಾಗೃತಿ

UDUPI ; ಪಶ್ಚಿಮ ಘಟ್ಟದದಲ್ಲಿ ಗಿಡ ನೆಡುವ ಅಭಿಯಾನ ; ಪರಿಸರ ಜಾಗೃತಿ

ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶದಲ್ಲೆ ಕಾಡು ಕ್ಷೀಣಿಸುತ್ತಾ ಬರುತ್ತಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೊರಟರೆ ಸಾಕಷ್ಟು ಸಿಗಬಹುದು, ಹಾಗಾಗಿ ಅಂತಿಮ ಗಮನಿಸಿದರೆ ಕಾಡು ಕಾಡಾಗಿಯೇ ಉಳಿಸುವಲ್ಲಿ ನಾವು ಎಡವಿದ್ದೇವೆ ಅನ್ನುದಂತು ಸತ್ಯ. ಆದರೆ ಕರಾವಳಿಯ ತಂಡ ಸದ್ಯ ನಿರಂತರವಾಗಿ ಪರಿಸರಕ್ಕೆ ಹಸಿರು ಹೊದಿಕೆ ಹೊದಿಸುವ ಕಾರ್ಯ ಮಾಡ್ತಾ ಇದೆ. 

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳು ಕೃಷಿ, ವ್ಯಾಪಾರ ಇನ್ನಿತರ ಉದ್ದೇಶಕ್ಕೆ ಕಾಡು ನಾಶ ಆಗ್ತಾ ಇದೆ. ಪಶ್ಚಿಮ ಘಟ್ಟದ ಬುಡದಲ್ಲಿರುವ ಹೆಬ್ರಿ,ಪೆರ್ಡೂರು, ಕಾರ್ಕಳ ಪರಿಸರವು ಇದಕ್ಕೆ ಹೊರತಾಗಿಲ್ಲ. ಹಾಗಾಗಿ ಪರಿಸರಕ್ಕೆ ಮತ್ತೆ ಹಸಿರು ಹೊದಿಕೆ ಹೊದಿಸುವ ಕಾರ್ಯ ಕರಾವಳಿ ವಿವಿಧ ತಂಡಗಳು ಮಾಡುತ್ತಿದೆ. ಅಪರೂಪದ ಕಾರ್ಯಕ್ರಮವಾಗಿ ಗಿಡ ನೆಡುವುದರ ಜೊತೆಗೆ ಪರಿಸರ ಜಾಗೃತಿ ಮೂಡಿಸುವ ವಿಶಿಷ್ಟ ಕಾರ್ಯಕ್ರಮ ನಡೆಯುತ್ತಿದೆ. 

ಉಡುಪಿ ವಕೀಲರ ಸಂಘ, NECF ಮತ್ತು ಕಾನೂನು ಸೇವಾ ಪ್ರಾಧಿಕಾರ ಸಹಯೋಗದೊಂದಿಗೆ ಪಶ್ಚಿಮ ಘಟ್ಟಗಳ ಹಸಿರು ಹೊದಿಕೆ  ಕಾರ್ಯಕ್ರಮವನ್ನು ಪೆರ್ಡೂರಿನಲ್ಲಿ ನಡೆಯಿತು. ಪರಿಸರಾಸಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿ ಜಾಗೃತಿಮೂಡಿಸುವುದರೊಂದಿಗೆ 500 ಸಸಿ ನೆಡಲಾಯಿತು. .ಅಲ್ಲದೆ ಇದು ಇಲ್ಲಿಗೆ ಮುಗಿಯದೇ ಮುಂದಿನ 10 ಭಾನುವಾರ ನಿರಂತರವಾಗಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯ 10 ಅರಣ್ಯ ವಲಯಗಳಲ್ಲಿ ನಡೆಯಲಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99