-->
Hijab Girl ಮಂಡ್ಯದ ಮುಸ್ಕಾನ್‌ಗೆ ಅಲ್‌ಖೈದಾ ಶಹಬ್ಬಾಸ್‌ಗಿರಿ - ಆದರೆ ಮುಸ್ಕಾನ್ ತಂದೆ ಹೇಳಿದ್ದೇನು?

Hijab Girl ಮಂಡ್ಯದ ಮುಸ್ಕಾನ್‌ಗೆ ಅಲ್‌ಖೈದಾ ಶಹಬ್ಬಾಸ್‌ಗಿರಿ - ಆದರೆ ಮುಸ್ಕಾನ್ ತಂದೆ ಹೇಳಿದ್ದೇನು?

ಬೆಂಗಳೂರು: ಹಿಜಾಬ್ ಸಂಘರ್ಷದ ವೇಳೆ ಅಲ್ಲಾಹು ಅಕ್ಬರ್ ಎಂದು ಕೂಗಿ, ಸಂಘಪರಿವಾರದ ವಿದ್ಯಾರ್ಥಿಗಳನ್ನು ಏಕಾಂಗಿಯಾಗಿ ಎದುರಿಸಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‍ನನ್ನು ಭಾರತದ ಶ್ರೇಷ್ಠ ಮಹಿಳೆ ಎಂದು ಅಲ್‍ಖೈದಾ ಮುಖ್ಯಸ್ಥ ಅಯ್ಯನ್ ಜವಾರಿ ಬಣ್ಣಿಸಿದ್ದಾನೆ.
ಈ ಕುರಿತು ಸುಮಾರು ಎಂಟು ನಿಮಿಷದ ವಿಡಿಯೋ ಬಿಡುಗಡೆ ಮಾಡಿರುವ ಜವಾರಿ, ಮುಸ್ಕಾನ್‍ಳ ಧೈರ್ಯ, ಶೌರ್ಯ ನಮ್ಮೆಲ್ಲರಿಗೂ ಮಾದರಿ. ಈ ದಿಟ್ಟ ಮಹಿಳೆ ನಿಜಕ್ಕೂ ಭಾರತದ ಶ್ರೇಷ್ಠ ಮಹಿಳೆ ಎಂದು ಹೊಗಳಿದ್ದಾನೆ.

ಆದರೆ ಈ ಬೆಳವಣಿಗೆಗೆ ಪ್ರತಿಕ್ರಯಿಸಿರುವ ಮುಸ್ಕಾನ್ ತಂದೆ, ನಮ್ಮ ಪಾಡಿಗೆ ನಾವು ಜೀವನ ಮಾಡಿಕೊಂಡು ಹೋಗುತ್ತಿದ್ದೇವೆ. ನಮಗೆ ಯಾರ ಸಹಾಯ ಬೇಡ, ನಮ್ಮ ಪಾಡಿಗೆ ನನ್ನನ್ನ ಬಿಡಿ. ನಮ್ಮನ್ನ ನೆಮ್ಮದಿಯಾಗಿ ಬದುಕಲು ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article