![ಮಂಗಳೂರಿನಲ್ಲಿ ಯುವಕನನ್ನು ಅಟ್ಟಾಡಿಸಿ ಕೊಲೆ ಮಂಗಳೂರಿನಲ್ಲಿ ಯುವಕನನ್ನು ಅಟ್ಟಾಡಿಸಿ ಕೊಲೆ](https://lh3.googleusercontent.com/-7YlSRwyYoWQ/YmqtbE3VzHI/AAAAAAAAVEc/lFJ6ZFNK_uIZWsydFaMyDMNTx8rCG0cxACNcBGAsYHQ/s1600/1651158375528384-0.png)
ಮಂಗಳೂರಿನಲ್ಲಿ ಯುವಕನನ್ನು ಅಟ್ಟಾಡಿಸಿ ಕೊಲೆ
Thursday, April 28, 2022
ಮಂಗಳೂರು; ಮಂಗಳೂರಿನಲ್ಲಿ ಯುವಕ ನೊಬ್ಬನನ್ನು ಅಟ್ಟಾಡಿಸಿ ಕೊಲೆ ಮಾಡಿದ ಘಟನೆ ಇಂದು ಸಂಜೆ ನಡೆದಿದೆ.
ಮಂಗಳೂರಿನ ಹೊಯಿಗೆ ಬಜಾರ್ ನ ರಾಹುಲ್ ( 26) ಹತ್ಯೆಯಾದ ವ್ಯಕ್ತಿ. ಈತ ನಗರ ದಕ್ಷಿಣ (ಪಾಂಡೇಶ್ವರ ) ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ
ಇಂದು ಎಮ್ಮೆಕೆರೆ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಬಳಿ ಇದ್ದ ಈತ ನನ್ನು 4 ಮಂದಿಯ ತಂಡ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.
ಮೃತದೇಹವನ್ನು ಶವಗಾರದಲ್ಲಿರಿಸಲಾಗಿದ್ದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.