-->

ಓದುಗರ ಗಮನಕ್ಕೆ

ಗಲ್ಪ್ ಕನ್ನಡಿಗ.ಕಾಮ್ ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಗಲ್ಪ್ ಕನ್ನಡಿಗ ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Live TV ಚರ್ಚೆಯಲ್ಲಿಯೇ ತನ್ನ ಕೋಟ್ ಕಳಚಿ ಪ್ರತ್ಯುತ್ತರ ನೀಡಿದ ಆಂಕರ್- ಯಾಕೆ ಗೊತ್ತಾ?

Live TV ಚರ್ಚೆಯಲ್ಲಿಯೇ ತನ್ನ ಕೋಟ್ ಕಳಚಿ ಪ್ರತ್ಯುತ್ತರ ನೀಡಿದ ಆಂಕರ್- ಯಾಕೆ ಗೊತ್ತಾ?

ಎರ್ನಾಕುಲಂ: ಹಿಜಾಬ್ ಕುರಿತ ಟಿವಿ ಪ್ಯಾನಲ್ ಚರ್ಚೆಯ ವೇಳೆ ಚರ್ಚೆಗೆ ಆಗಮಿಸಿದ್ದ ಅತಥಿಗೆ ಪ್ರತ್ಯುತ್ತರ ನೀಡುವ ಸಲುವಾಗಿ ನಿರೂಪಕ ಲೈವ್ ಶೋನಲ್ಲೆ ತನ್ನ ಕೋಟ್ ಕಳಚಿದ ಘಟನೆ ನಡೆದಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಕೇರಳದ ಮೀಡಿಯಾ ಒನ್ ಎಂಬ ಮಲಯಾಳಂ ಚಾನೆಲ್‌ನಲ್ಲಿ. 

ಈ ಚಾನೆಲ್‌ನಲ್ಲಿ ಕರ್ನಾಟಕದಲ್ಲಿ ಉಂಟಾದ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರದ ಅತಿಥಿಗಳೊಂದಿಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕೆನಡಿ ಎಂಬ ಅತಿಥಿ 'ಪ್ರತಿಯೊಂದು ಸಂಸ್ಥೆಗೂ ವಸ್ತ್ರ ಸಂಹಿತೆ ಇರುತ್ತದೆ. ತಮ್ಮ ಚಾನೆಲ್‌ನಲ್ಲಿ ತಮಗೆ ಕೋಟು ಇಲ್ಲದೆ ಸುದ್ದಿ ನಿರೂಪಿಸಲು ಸಾಧ್ಯವೇ ಎಂದು ಉದಾಹರಣೆಯನ್ನು ನೀಡಿದ್ದರು.

ಇದಕ್ಕೆ ಪ್ರತಿಕ್ರಯಿಸಿದ ನಿರೂಪಕ ನಿಶಾದ್ ರಾವುತರ್ ನಮ್ಮ ಸಂಸ್ಥೆಯಲ್ಲಿ ಹೇಗೂ ಸುದ್ದಿ ಓದಬಹುದು. ಹಿಜಾಬ್ ಧರಿಸಿಯೂ, ಧರಿಸದೆಯೂ; ಕೋಟ್ ಧರಿಸಿಯೂ, ಧರಿಸದೆಯೂ ಸುದ್ದಿ ಓದಬಹುದು ಎಂದರಲ್ಲದೇ, ಲೈವ್ ನಲ್ಲೇ ತನ್ನ ಕೋಟ್ ಕಳಚುವ ಮೂಲಕ ಹೇಗೂ ಸುದ್ದಿ ಓದಬಹುದು ಎಂದು ನಿರೂಪಿಸಿದ್ದು, ಪ್ರೇಕ್ಷಕರ ಅಚ್ಚರಿಗೆ ಕಾರಣವಾಯಿತು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99