![ಭೀಕರ ರಸ್ತೆ ಅಪಘಾತ- 7 ಮಂದಿ ಸಾವು ಭೀಕರ ರಸ್ತೆ ಅಪಘಾತ- 7 ಮಂದಿ ಸಾವು](https://lh3.googleusercontent.com/-L4mK4HRavH4/YeDzIiF0MXI/AAAAAAAAUQ4/UPyqfI9MH2g5XITEk9TsIZIjJ36tZoTQwCNcBGAsYHQ/s1600/1642132253296783-0.png)
ಭೀಕರ ರಸ್ತೆ ಅಪಘಾತ- 7 ಮಂದಿ ಸಾವು
Friday, January 14, 2022
ದಾವಣಗೆರೆ: ಡಿವೈಡರ್ ಗೆ ಕಾರು ಡಿಕ್ಕಿಯಾಗಿ 7 ಜನ ಸಾವನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಬಳಿ ನಡೆದಿದೆ
ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದ ಈ ಭೀಕರ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ.
ಹೆದ್ದಾರಿಯಲ್ಲಿ ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ .
ಅಪಘಾತದ ರಭಸಕ್ಕೆ ಸ್ಥಳದಲ್ಲೇ 6ಜನ ಮೃತಪಟ್ಟರೆ ಮತ್ತೊರ್ವ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ.
ಮೃತರು ಯಾದಗಿರಿ ಜಿಲ್ಲೆಯ ಶಹಾಪುರ ಮೂಲದ ನಿವಾಸಿಗಳಾಗಿದ್ದಾರೆ. ಬೆಂಗಳೂರಿನಿಂದ ಹೊಸಪೇಟೆ ಗೆ ಹೋಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.