10 ನೇ ತರಗತಿ ವಿದ್ಯಾರ್ಥಿಗಳಿಗೆ ಮೋದಿಯವರು ಪರೀಕ್ಷೆಯ ಭಯ ಹೋಗಲಾಡಿಸಲು ಬರೆದ "EXAM WARRIORS" ವಿತರಣೆ


ಭಾರತೀಯ ಜನತಾ ಪಾರ್ಟಿ  ಸಾಮಾಜಿಕ ಜಾಲ ತಾಣ ಪ್ರಕೋಷ್ಠ  ಮಂಗಳೂರು ದಕ್ಷಿಣ ಮಂಡಲದ ವತಿಯಿಂದ  ಪ್ರಧಾನ ಮಂತ್ರಿ ಶ್ರಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ 17 ನೇ ಸೆಪ್ಟೆಂಬರ್ ರಿಂದ 7 ನೇ  ಅಕ್ಟೋಬರ್ ತನಕ ನಡೆಯುವ  ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮೋದಿಜಿಯವರು ಪರೀಕ್ಷೆಯ ಭಯ ಹೋಗಲಾಡಿಸಲು ಬರೆದ  "EXAM WARRIORS" ವಿತರಣೆ ಸಮಾರಂಭ ಇಂದು ಶಕ್ತಿನಗರದ ನಾಲ್ಯಾ ಪದವು ಸರ್ಕಾರೀ ಶಾಲೆ ಯಲ್ಲಿ ಜರುಗಿತು.



ಈ ಸಂದರ್ಭದಲ್ಲಿ , ಜಿಲ್ಲಾ ಸಾಮಾಜಿಕ ಜಾಲ ತಾಣ ಸಂಚಾಲಕರಾದ ಶ್ರೀ ಅಜಿತ್ ಉಳ್ಳಾಲ್ , ಸಹಸಂಚಾಲಕರಾದ ಶ್ರೀ ಧೀರೇಶ್ , ಮಂಡಲ ಉಪಾಧ್ಯಕ್ಷರಾದ ಶ್ರೀ ಅಜಯ್ ಕುಲಶೇಕರ್ ಹಾಗೂ ಶ್ರೀ ರಮೇಶ್ ಹೆಗ್ಡೆ ಮಂಡಲ ಸಾಮಾಜಿಕ ಜಾಲ ತಾಣ ಸಂಚಾಲಕರಾದ ಶ್ರೀ ನಿಲೇಶ್ ಕಾಮತ ಸ್ಥಳೀಯ ಮ ನ ಪಾ ಸದಸ್ಯರಾದ ಶ್ರೀಮತಿ ವನಿತಾ ಪ್ರಸಾದ್ , ಮ ನ ಪಾ ಸದಸ್ಯರಾದ ಶ್ರೀ ಕಿಶೋರ್ ಕೊಟ್ಟಾರಿ ಹಾಗೂ ಶ್ರೀಮತಿ ಕಾವ್ಯ ನಟರಾಜ್ , ಸಾಮಾಜಿಕ ಜಾಲ ತಾಣ ಮಂಡಲ ಸಹಸಂಚಾಲಕರಾದ ಶ್ರೀ ಅಶ್ವಿತ್ ಕೊಟ್ಟಾರಿ ,ಉತ್ತರ ಮಹಾಶಕ್ತಿ ಕೇಂದ್ರ ಉಪಾಧ್ಯಕ್ಷರಾದ  ಶ್ರೀ ಚರಿತ್ ಪೂಜಾರಿ,ಪೂರ್ವ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿಯಾದ ಶ್ರೀ ರವಿಚಂದ್ರ ಉತ್ತರ ಮಹಾಶಕ್ತಿ ಕೇಂದ್ರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಸಾಯಿ ಪ್ರಸಾದ್ ಶೆಟ್ಟಿ , ಮಂಡಲ ಸಾಮಾಜಿಕ ಜಾಲ ತಾಣ ಸದಸ್ಯರಾದ ಶ್ರೀ ವಿಕ್ರಂ ಶೆಟ್ಟಿ , ಶ್ರೀ ಶಬರೀಶ್ , ಶ್ರೀ ತೇಜಸ್ , ಶಕ್ತಿ ಕೇಂದ್ರ ಅಧ್ಯಕ್ಷರಾದ ರಿತೇಶ್ ಹಾಗೂ ಕಾರ್ಯಕರ್ತರು ಉಪಸ್ಥಿತರು.ಮಂಡಲ ಸಾಮಾಜಿಕ ಜಾಲ ತಾಣ ಪ್ರಕೋಷ್ಠದ ಸಹ ಸಂಚಾಲಕರಾದ ಶ್ರೀ ರೋಷನ್ ರೆನಾಲ್ಡ್ ಕಾರ್ಯಕ್ರಮ ನಿರ್ವಹಿಸಿದರು.