Header Ad

Vote ಮಾಡಿ- ಕಾಂಗ್ರೆಸ್ ಪಕ್ಷದ ಟೀಕಾಕಾರ ಡಾ ಸಿ ಎಸ್ ದ್ವಾರಕನಾಥ್ ಅವರು ಕೈ ಪಕ್ಷವನ್ನು ಸೇರಿದ್ದು ಸರಿಯೋ, ತಪ್ಪೋ?




ಬೆಂಗಳೂರು; ಕರ್ನಾಟಕ‌ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಡಾ ಸಿ ಎಸ್ ದ್ವಾರಕನಾಥ್ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.


ಸಿ ಎಸ್ ದ್ವಾರಕನಾಥ್ ಕಾಂಗ್ರೆಸ್ ಪಕ್ಷದ ಟೀಕಾಕಾರರಾಗಿದ್ದರು. ಈ ಹಿಂದೆ ಅವರು ಶ್ರೀರಾಮುಲು ನೇತೃತ್ವದ BSR ಕಾಂಗ್ರೆಸ್ ಪಕ್ಷದಲ್ಲಿದ್ದರು. BSR ಪಕ್ಷದ ಮಾರ್ಗದರ್ಶಕರಾಗಿ ಹಿಂದುಳಿದ, ಅಲ್ಪಸಂಖ್ಯಾತ ವರ್ಗವನ್ನು ಪಕ್ಷಕ್ಕೆ ಕರೆತರಲು ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು, ಪ್ರವಾಸಗಳನ್ನು ನಡೆಸಿದ್ದ ಅವರು ಬಳಿಕ ಬಿಎಸ್‌ಆರ್‌ ಪಕ್ಷ ತೊರೆದು ಬಿಎಸ್‌ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಬಿಎಸ್‌ಪಿಯಿಂದ 2019 ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.  ಇದೀಗ ಕಾಂಗ್ರೆಸ್ ಪಕ್ಷವನ್ನು ದ್ವಾರಕನಾಥ್ ಅವರು ಸೇರ್ಪಡೆಗೊಂಡಿದ್ದಾರೆ. ಈ ನಿರ್ಧಾರ ರಾಜಕೀಯ ದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ವಿಚಾರದ ಬಗ್ಗೆ  ದಿನೇಶ್ ಅಮೀನ್ ಮಟ್ಟು ಅವರ ವ್ಯಂಗ್ಯದ ಪೋಸ್ಟ್ ವೈರಲ್ ಆಗಿದೆ. 




ದ್ವಾರಕನಾಥ್ ಅವರು ಕಾಂಗ್ರೆಸ್ ಪಕ್ಷ ಸೇರಿರುವುದು ಸರಿಯೋ, ತಪ್ಪೋ ಎಂಬುದನ್ನು ವೋಟ್ ಮೂಲಕ ಅಭಿಪ್ರಾಯ ತಿಳಿಸಿ. ಟ್ವಿಟರ್  ನಲ್ಲಿ ವೋಟ್ ಮಾಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ. ಜೊತೆಗೆ ಗಲ್ಫ್ ಕನ್ನಡಿಗ ವೆಬ್ ಸೈಟ್ ನ ಟ್ವಿಟರ್ ಅಕೌಂಟನ್ನು ಫಾಲೋ ಮಾಡಲು‌ ಮರೆಯದಿರಿ.

ಇತ್ತೀಚಿನ ಸುದ್ದಿಗಳು