-->

ಮುಕ್ತಾಯಗೊಳ್ಳುತ್ತಿದೆ 'ಬ್ರಹ್ಮಗಂಟು' ಸೀರಿಯಲ್: ನಟ ಭರತ್ ಬೊಪಣ್ಣ ಭಾವುಕ....

ಮುಕ್ತಾಯಗೊಳ್ಳುತ್ತಿದೆ 'ಬ್ರಹ್ಮಗಂಟು' ಸೀರಿಯಲ್: ನಟ ಭರತ್ ಬೊಪಣ್ಣ ಭಾವುಕ....

ಸುಮಾರು ನಾಲ್ಕು ವರ್ಷಗಳಿಂದ ಜೀ ಕನ್ನಡ ವಾಹಿನಿಯ ವೀಕ್ಷಕರನ್ನು ಮನೋರಂಜಿಸುತ್ತಿರುವ 'ಬ್ರಹ್ಮಗಂಟು' ಧಾರಾವಾಹಿ ಮುಕ್ತಾಯವಾಗುತ್ತಿದೆ. ಈ ಬಗ್ಗೆ ನಟ ಭರತ್ ಬೊಪಣ್ಣ ಭಾವುಕ ಪೋಸ್ಟನ್ನು ಶೇರ್ ಮಾಡಿಕೊಂಡಿದ್ದಾರೆ.

'ಬ್ರಹ್ಮಗಂಟು ಧಾರಾವಾಹಿಯ ಕೊನೆ ಶೆಡ್ಯೂಲ್ ಮುಗಿಸಿರುವೆ. ನಾಲ್ಕಕ್ಕೂ ಹೆಚ್ಚು ವರ್ಷಗಳ ಜರ್ನಿ, ಸಾವಿರಕ್ಕೂ ಹೆಚ್ಚಿನ ಎಪಿಸೋಡ್ ಅಂತ್ಯವಾಗುತ್ತಿದೆ. ಇದೊಂದು ಅದ್ಭುತ ಪಯಣ. ಈ ಪ್ರಾಜೆಕ್ಟ್‌ ನನಗೆ ಸದಾ ಸ್ಪೆಷಲ್ ಆಗಿರುತ್ತದೆ. ಶ್ರುತಿ ನಾಯ್ಡು, ರಮೇಶ್ ಇಂದಿರಾ ಸರ್ ಹಾಗೂ ಜೀ ಕನ್ನಡ ವಾಹಿನಿ ನನ್ನನ್ನು ನಂಬಿ ಈ ಅವಕಾಶ ಮತ್ತು ಜವಾಬ್ದಾರಿ ನೀಡಿದ್ದಕ್ಕೆ ಧನ್ಯವಾದಗಳು. ನೀವು ನನ್ನ ಮೇಲಿಟ್ಟ ಭರವಸೆ ಹಾಗೂ ನಂಬಿಕೆಯನ್ನು ನಾನೂ ಪೂರ್ತಿಗೊಳ್ಳಿಸಿರುವೆ, ಎಂದು ಭಾವಿಸುತ್ತೇನೆ. ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಸಹ ಕಲಾವಿದರಿಗೂ ಧನ್ಯವಾದಗಳು. ಅದರಲ್ಲೂ ನಿರ್ದೇಶಕ ಪ್ರತಾಪ್, ತಂತ್ರಜ್ಞರು, , ಲೈಟ್ ಆಫೀಸರ್‌ ನಿಮ್ಮೆಲ್ಲರ ಸಪೋರ್ಟ್‌ನಿಂದ ಈ ಧಾರಾವಾಹಿ ಯಶಸ್ವಿಯಾಗಿ ಪ್ರಸಾರವಾಗಿದೆ. ನಮಗೆ ಇಷ್ಟೊಂದು  ಪ್ರೀತಿ ತೋರಿಸಿದ ಕರ್ನಾಟಕದ ಜನರಿಗೆ ಧನ್ಯವಾದಗಳು. ಮತ್ತೊಂದು ಒಳ್ಳೆ ಪ್ರಾಜೆಕ್ಟ್ ಮೂಲಕ ಕಮ್‌ಬ್ಯಾಕ್ ಮಾಡುವೆ. ಕೊನೆಯ ಸಂಚಿಕೆಯನ್ನು ನೋಡುವುದು ಮರೆಯಬೇಡಿ. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುವೆ,' ಎಂದು ಭರತ್ ಬರೆದುಕೊಂಡಿದ್ದಾರೆ.









Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99