-->

ಯಶಿಕಾ ಕಾರು ಅಪಘಾತ ಪ್ರಕರಣ.. ಸ್ನೇಹಿತ ಭವಾನಿ ತೊಟ್ಟ ಉಡುಗೆಯೇ ಈ ಅಪಘಾತಕ್ಕೆ ಕಾರಣವಾಯ್ತ..??

ಯಶಿಕಾ ಕಾರು ಅಪಘಾತ ಪ್ರಕರಣ.. ಸ್ನೇಹಿತ ಭವಾನಿ ತೊಟ್ಟ ಉಡುಗೆಯೇ ಈ ಅಪಘಾತಕ್ಕೆ ಕಾರಣವಾಯ್ತ..??

 
ಚೆನ್ನೈ:  ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಕಾಲಿವುಡ್​ ನಟಿ ಯಶಿಕಾ ಆನಂದ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಅಪಘಾತದಲ್ಲಿ ಯಶಿಕಾ ಅವರ  ಸ್ನೇಹಿತೆ ಭವಾನಿ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇದೀಗ ಅಪಘಾತಕ್ಕೆ ಕಾರಣ ಏನೆಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಪೊಲೀಸ್​ ವರದಿಗಳ ಪ್ರಕಾರ ಮಿಡ್​ನೈಟ್​ ಪಾರ್ಟಿಯ ಬಳಿಕ ಯಶಿಕಾ, ಭವಾನಿ ಮತ್ತು ಇಬ್ಬರು ಪುರುಷ ಸ್ನೇಹಿತರು ಮಹಾಬಲಿಪುರ ಏರಿಯಾದಲ್ಲಿ ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಕಾರು ಚಲಾಯಿಸುವಾಗ ಏರು ಧ್ವನಿಯಲ್ಲಿ ಮ್ಯೂಸಿಕ್​ ಹಾಕಲಾಗಿತ್ತೆನ್ನಲಾಗಿದೆ. ಇದಲ್ಲದೆ, ಕಾರಿನ ಮೇಲಿನ ಸನ್​ರೂಫ್​ ತೆರೆದು ಅದರಲ್ಲಿ ಮೃತ ಭವಾನಿ ಸೀಟಿನ ಮೇಲೆಯೇ ನಿಂತು ತಲೆಯನ್ನು ಹೊರಗೆ ತೂರಿಸಿ ಹಾಡಿಗೆ ಡ್ಯಾನ್ಸ್​ ಮಾಡುತ್ತಿದ್ದಳು ಎನ್ನಲಾಗಿದೆ. 

ಈ ವೇಳೆ ಆಕೆಯ ಉಡುಗೆ ಗಾಳಿಗೆ ಬೀಸಿ ದುರಾದೃಷ್ಟವಶಾತ್​​ ಯಶಿಕಾ ಮುಖವನ್ನು ಮುಚ್ಚಿದೆ. ಮುಂದೆ ಏನೂ ಕಾಣದಿದ್ದಾಗ ಸಹಜವಾಗಿಯೇ ಯಶಿಕಾಗೆ ಗಾಬರಿ ಆಗಿ, ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದಾದ ಮರುಕ್ಷಣವೇ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99