-->

ಹೆರಿಗೆ ಬಳಿಕ ಪತ್ನಿ ಶಸ್ತ್ರಚಿಕಿತ್ಸೆ ಮಾಡಿಕೊಂಡದಕ್ಕೆ... ಪತಿ ಮಾಡಿದ್ದೇನು ಗೊತ್ತಾ..?

ಹೆರಿಗೆ ಬಳಿಕ ಪತ್ನಿ ಶಸ್ತ್ರಚಿಕಿತ್ಸೆ ಮಾಡಿಕೊಂಡದಕ್ಕೆ... ಪತಿ ಮಾಡಿದ್ದೇನು ಗೊತ್ತಾ..?

ತುಮಕೂರು: ಹೆರಿಗೆ ಬಳಿಕ ಪತ್ನಿ ತನಗೆ ತಿಳಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ ಎಂಬ ಕಾರಣಕ್ಕೆ ಬಗ್ಗೆ ಪತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ತಿ ಪಟೂರಿನಲ್ಲಿ ನಡೆದಿದೆ.

ತಿಪಟೂರಿನ ಅಮ್ಮನಬಾವಿ ಗ್ರಾಮದ ನಾಗರಾಜ್ ಎಸ್​.ಮೃತ ವ್ಯಕ್ತಿ.  ನಾಗರಾಜ್ ಅರಸೀಕೆರೆ ತಾಲೂಕು ಚಿಂದೇನಹಳ್ಳಿ ಸಮೀಪದ ಸೋಮೆನಹಳ್ಳಿಯ ಬೇಬಿಕಲಾ ಅವರನ್ನು ಕಳೆದ ವರ್ಷ ವಿವಾಹವಾಗಿದ್ದರು.  ಬೇಬಿಕಲಾ ಗಂಡು ಮಗುವಿಗೆ ಜನ್ಮ ನೀಡಿದ್ದು ಹೆರಿಗೆ ಬಳಿಕ ಬೇಬಿಕಲಾ ಪತಿಗೆ ತಿಳಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ . ಇದರಿಂದ ಕೋಪಗೊಂಡ ನಾಗರಾಜ್, ಪತ್ನಿಯ ಸಂಬಂಧಿಕರೊಂದಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ದೂರು ನೀಡುವುದಾಗಿ ಸಂಬಂಧಿಕರು ಹೆದರಿಸಿದ್ದರು.

ಸಂಬಂಧಿಕರ ಮಾತಿನಿಂದ ಮನನೊಂದ ನಾಗರಾಜ್, ಅಮ್ಮನಬಾವಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99