![ಹೆರಿಗೆ ಬಳಿಕ ಪತ್ನಿ ಶಸ್ತ್ರಚಿಕಿತ್ಸೆ ಮಾಡಿಕೊಂಡದಕ್ಕೆ... ಪತಿ ಮಾಡಿದ್ದೇನು ಗೊತ್ತಾ..? ಹೆರಿಗೆ ಬಳಿಕ ಪತ್ನಿ ಶಸ್ತ್ರಚಿಕಿತ್ಸೆ ಮಾಡಿಕೊಂಡದಕ್ಕೆ... ಪತಿ ಮಾಡಿದ್ದೇನು ಗೊತ್ತಾ..?](https://lh3.googleusercontent.com/-PdlarvuDoLY/YNK4L1iiQoI/AAAAAAAAsEc/9Vu1GwihepsBo-y1FQDiDRBGcxzXBjE_QCLcBGAsYHQ/s1600/1624422434558714-0.png)
ಹೆರಿಗೆ ಬಳಿಕ ಪತ್ನಿ ಶಸ್ತ್ರಚಿಕಿತ್ಸೆ ಮಾಡಿಕೊಂಡದಕ್ಕೆ... ಪತಿ ಮಾಡಿದ್ದೇನು ಗೊತ್ತಾ..?
Wednesday, June 23, 2021
ತುಮಕೂರು: ಹೆರಿಗೆ ಬಳಿಕ ಪತ್ನಿ ತನಗೆ ತಿಳಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ ಎಂಬ ಕಾರಣಕ್ಕೆ ಬಗ್ಗೆ ಪತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ತಿ ಪಟೂರಿನಲ್ಲಿ ನಡೆದಿದೆ.
ತಿಪಟೂರಿನ ಅಮ್ಮನಬಾವಿ ಗ್ರಾಮದ ನಾಗರಾಜ್ ಎಸ್.ಮೃತ ವ್ಯಕ್ತಿ. ನಾಗರಾಜ್ ಅರಸೀಕೆರೆ ತಾಲೂಕು ಚಿಂದೇನಹಳ್ಳಿ ಸಮೀಪದ ಸೋಮೆನಹಳ್ಳಿಯ ಬೇಬಿಕಲಾ ಅವರನ್ನು ಕಳೆದ ವರ್ಷ ವಿವಾಹವಾಗಿದ್ದರು. ಬೇಬಿಕಲಾ ಗಂಡು ಮಗುವಿಗೆ ಜನ್ಮ ನೀಡಿದ್ದು ಹೆರಿಗೆ ಬಳಿಕ ಬೇಬಿಕಲಾ ಪತಿಗೆ ತಿಳಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ . ಇದರಿಂದ ಕೋಪಗೊಂಡ ನಾಗರಾಜ್, ಪತ್ನಿಯ ಸಂಬಂಧಿಕರೊಂದಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ದೂರು ನೀಡುವುದಾಗಿ ಸಂಬಂಧಿಕರು ಹೆದರಿಸಿದ್ದರು.
ಸಂಬಂಧಿಕರ ಮಾತಿನಿಂದ ಮನನೊಂದ ನಾಗರಾಜ್, ಅಮ್ಮನಬಾವಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.