-->
ಹೆತ್ತವರು ಬೈಕ್ ಕೊಡಿಸಿಲ್ಲ ಎಂದು ಇಂಜಿನಿಯರ್ ಆತ್ಮಹತ್ಯೆ

ಹೆತ್ತವರು ಬೈಕ್ ಕೊಡಿಸಿಲ್ಲ ಎಂದು ಇಂಜಿನಿಯರ್ ಆತ್ಮಹತ್ಯೆ

ಮೈಸೂರು: ಪೋಷಕರು  ಬೈಕ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಸಾಫ್ಟ್ ವೇರ್ ಇಂಜಿನಿಯರೊಬ್ಬರು ನೇಣಿಗೆ ಶರಣಾದ ಘಟನೆ ಕುವೆಂಪು ನಗರದಲ್ಲಿ ನಡೆದಿದೆ.

ಮೃತರನ್ನು ಅಜಯ್ (25)ಎಂದು ಗುರುತಿಸಲಾಗಿದೆ. ಈತ ಕಳೆದ ಒಂದು  ವರ್ಷದಿಂದ  ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

 ತನ್ನ ತಂದೆ ತಾಯಿಯ ಜೊತೆ ರಾಯಲ್ ಎನ್ಫೀಲ್ಡ್ ಬೈಕ್ ಖರೀದಿಸಲು ಕೇಳಿಕೊಂಡಿದ್ದರು. ಆದರೆ ಪೋಷಕರು ಸದ್ಯಕ್ಕೆ ಬೇಡ, ಸ್ವಲ್ಪ ದಿನ ಹೋಗಲಿ ಎಂದು ಹೇಳಿದ್ದರು ಎನ್ನಲಾಗಿದೆ.  ಇದರಿಂದ ಮನನೊಂದ ಅಜಯ್  ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.  ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.   

Ads on article

Advertise in articles 1

advertising articles 2

Advertise under the article