-->

ಊಟ ಮಾಡುತ್ತಿಲ್ಲವೆಂದು ಹೆತ್ತಮಗುವನ್ನೇ ಪ್ರಿಯಕರನೊಂದಿಗೆ ಸೇರಿ ಹೊಡೆದು ಕೊಂದ ಪಾಪಿತಾಯಿ

ಊಟ ಮಾಡುತ್ತಿಲ್ಲವೆಂದು ಹೆತ್ತಮಗುವನ್ನೇ ಪ್ರಿಯಕರನೊಂದಿಗೆ ಸೇರಿ ಹೊಡೆದು ಕೊಂದ ಪಾಪಿತಾಯಿ

ಹೈದರಾಬಾದ್​: ಮೂರು ವರ್ಷದ ಮಗುವೊಂದು ಸರಿಯಾಗಿ ಊಟ ಮಾಡುತ್ತಿಲ್ಲವೆಂದು ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತತಾಯಿಯೋರ್ವಳು ವೈರ್ ನಿಂದ ಹೊಡೆದು ಕೊಂದ ಅಮಾನುಷ ಘಟನೆ ಜೀಡಿಮೆಟ್ಲ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿತೆ ಉದಯ ಎಂಬಾಕೆಗೆ ಸುರೇಶ್​ ಎಂಬವರೊಂದಿಗೆ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದು ಜಗದ್ಗಿರಿಗುಟ್ಟದಲ್ಲಿ ವಾಸಿಸುತ್ತಿದ್ದಾರೆ. ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಉದಯಗೆ ಭಾಸ್ಕರ್​ ಎಂಬಾತನ ಪರಿಚಯವಾಗಿದೆ. ಬಳಿಕ‌ ಉದಯ ಭಾಸ್ಕರ್​ ನೊಂದಿಗೆ ಸಲುಗೆಯಿಂದ ಇರಲು ತೊಡಗಿದ್ದಾಳೆ. ಇದನ್ನು ಕಂಡ ಸುರೇಶ್​ ತನ್ನ ಪತ್ನಿಗೆ ಎಚ್ಚರಿಸಿದ್ದಾನೆ. ಹೀಗಾಗಿ ಇವರಿಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಈ ಮನಸ್ತಾಪದಿಂದ ಮೂರು ವರ್ಷಗಳ ಹಿಂದೆ ಅವರು ಬೇರೆ-ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಆರೋಪಿತೆ ಉದಯ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಗಂಡನೊಂದಿಗೆ ಬೇರೆಯಾದ ಬಳಿಕ ಆರೋಪಿತೆ ಉದಯ ಮೂರು ವರ್ಷದ ಮಗ ಉಮೇಶ್​ ನೊಂದಿಗೆ ಭಗತ್​ಸಿಂಗ್​ ನಗರದಲ್ಲಿ ವಾಸಿಸುತ್ತಿದ್ದಳು. ಇದೀಗ ಉಮೇಶ ಸರಿಯಾಗಿ ಊಟ ಮಾಡುತ್ತಿಲ್ಲವೆಂದು ಪ್ರಿಯಕರ ಭಾಸ್ಕರ್​ ಜೊತೆ ಸೇರಿ​ ವೈರ್​ನಿಂದ ಥಳಿಸಿದ್ದಾಳೆ. ವೈರ್​ನ ಏಟು ತಾಳದೇ ಉಮೇಶ್​ ಮೂರ್ಛೆ ಹೋಗಿದ್ದಾನೆ. 

ಬಳಿಕ ತನ್ನ ಮೇಲೆ ಅನುಮಾನ ಬರಬಾರದೆಂದು ಮಗನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ ಚಿಕಿತ್ಸೆ ಫಲಿಸದೇ ಮಗು ಉಮೇಶ​ ಮಂಗಳವಾರ ಸಂಜೆ ಮೃತಪಟ್ಟಿದೆ‌. ಈ ಬಗ್ಗೆ ದೂರು ದಾಖಲಾಗಿದ್ದು,  ಇನ್ಸ್​ಪೆಕ್ಟರ್​ ಬಾಲರಾಜು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದಾಗ, ಊಟ ಮಾಡುತ್ತಿಲ್ಲವೆಂದು ಮಾಮೂಲಾಗಿ ಹೊಡೆದಿದ್ದಕ್ಕೆ ಹೀಗಾಗಿದೆ ಎಂದು ಉದಯ ಹೇಳಿದ್ದಾಳೆ. ಬಳಿಕ ಭಾಸ್ಕರ್​ ಮತ್ತು ಉದಯನನ್ನು ಪೊಲೀಸರು​ ವಿಚಾರಣೆ ನಡೆಸಿದಾಗ ಮಗುವಿಗೆ ಕೋಣೆಯೊಂದರಲ್ಲಿ ವೈರ್​ನಿಂದ ಥಳಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99