-->

ಅದ್ದೂರಿ ಮದುವೆಯ ಕನಸು ಕಂಡಿದ್ದ ಮೋಹಕ ನಟಿ ಸಂಜನ ಗಲ್ರಾನಿ ಈ ಸೇವೆ ನಿಜಕ್ಕೂ ಶ್ಲಾಘನೀಯ!

ಅದ್ದೂರಿ ಮದುವೆಯ ಕನಸು ಕಂಡಿದ್ದ ಮೋಹಕ ನಟಿ ಸಂಜನ ಗಲ್ರಾನಿ ಈ ಸೇವೆ ನಿಜಕ್ಕೂ ಶ್ಲಾಘನೀಯ!

  ಬೆಂಗಳೂರು: ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ ನಟಿ ಸಂಜನಾ ಗಲ್ರಾನಿ. ನಟಿ ಸಂಜನಾ ಗಲ್ರಾನಿ ತಮ್ಮ ಫೌಂಡೇಶನ್ ​ ಮೂಲಕ ಚಿತ್ರರಂಗದವರಷ್ಟೇ ಅಲ್ಲ, ಕಷ್ಟದಲ್ಲಿರುವವರಿಗೆ ರೇಷನ್​ ಕಿಟ್​ ವಿತರಿಸುವ ಮೂಲಕ, ಹಸಿದವರಿಗೆ ಅನ್ನದಾನ ಮಾಡುವ ಮೂಲಕ ಸ್ಪಂದಿಸುತ್ತಿದ್ದಾರೆ.

ಈ ಕುರಿತು ಮಾತನಾಡಿದ ಅವರು, “ನನಗೆ ಮದುವೆ ಅದ್ದೂರಿ ಆಗಿ ಮಾಡಿಕೊಳ್ಳಬೇಕು ಎಂಬ ಕನಸು ಇತ್ತು. ಎಲ್ಲರನ್ನೂ ಕರೆಯಬೇಕು ಅಂತ ಆಸೆಯಿತ್ತು. ಆದರೆ, ಮೊದಲ ಲಾಕ್​ಡೌನ್​ನಿಂದ ಅದು ಸಾಧ್ಯವಾಗಲಿಲ್ಲ. ಚಿತ್ರರಂಗದವರನ್ನೆಲ್ಲ ಕರೆದು ಊಟ ಹಾಕಿಸಬೇಕು ಎಂಬ ನನ್ನಾಸೆ ಈಡೇರಲಿಲ್ಲ. ಈಗ ಚಿತ್ರರಂಗದ ಹಲವರು  ತೊಂದರೆಯಲ್ಲಿದ್ದಾರೆ ಹಾಗಾಗಿ ಮದುವೆಗೆ ಅಂತ ಇಟ್ಟಿದ್ದ ದುಡ್ಡಿನಲ್ಲಿ ಇದೀಗ ಕಿಟ್​ಗಳನ್ನು ವಿತರಿಸುತ್ತಿದ್ದೇನೆ. ಸಂಭ್ರಮಕ್ಕಿಂತ ಜನರ ಕಷ್ಟಕ್ಕೆ ಸ್ಪಂದಿಸುವುದು ಬಹಳ ಮುಖ್ಯ. ಈಗಾಗಲೇ, ಚಿತ್ರರಂಗದ ವಿವಿಧ ವಲಯಗಳ 500ಕ್ಕೂ ಹೆಚ್ಚು ಜನರಿಗೆ ಕಿಟ್​ ವಿತರಿಸಲಾಗಿದೆ’ ಎಂದಿದ್ದಾರೆ ಸಂಜನಾ ಗಲ್ರಾನಿ.


 ಇನ್ನು, ಇವರು ಕಳೆದ 24 ದಿನಗಳಿಂದ ಅವರು ಪ್ರತಿದಿನ 500ಕ್ಕೂ ಹೆಚ್ಚು ಜನರಿಗೆ ಆಹಾರ ವಿತರಿಸುತ್ತಿದ್ದು ಮೊದಲ 12 ದಿನಗಳ ಕಾಲ ಶ್ರೀಕೃಷ್ಣ ಪರಮಾತ್ಮ ಫೌಂಡೇಶನ್​ ಅವರು ಅಡುಗೆ ಮಾಡಿ ಕೊಡುತ್ತಿದ್ದರು. ಅದನ್ನು ಹಂಚುವ ಕೆಲಸ ನಮ್ಮದಾಗಿತ್ತು. ಮೂರು ಪ್ರದೇಶಗಳಲ್ಲಿ ವಾಟ್ಸಪ್​ ಗ್ರೂಪ್​ ಮಾಡಿ, ಅವರಿಗೆ ಇಂತಿಷ್ಟು ಸಮಯಕ್ಕೆ ಬರುತ್ತೇವೆ ಎಂದು ಹೇಳಿ, ಆ ಸಮಯಕ್ಕೆ ಹೋಗಿ ಹಂಚುತ್ತಿದ್ದೆವು. ಅವರು ನಿಲ್ಲಿಸಿದ ನಂತರ, ನಾವೇ ನಮ್ಮ ಮನೆಯ ಕಾರ್​ ಪಾರ್ಕಿಂಗ್​ನಲ್ಲೇ ಅಡುಗೆ ಮಾಡಿ, ಕಷ್ಟದಲ್ಲಿರುವವರಿಗೆ ಹಂಚಿದೆವು. ಜನ ಬರುತ್ತಾರೋ ಇಲ್ಲವೋ ಎಂಬ ಭಯವಿತ್ತು. ಸ್ವಲ್ಪ ಹೊತ್ತಿನಲ್ಲೇ ಮಾಡಿದ ಅಷ್ಟೂ ಅಡುಗೆ ಖಾಲಿಯಾಯಿತು. ಹೀಗೆ ಪ್ರತಿ ದಿನ 500ಕ್ಕೂ ಹೆಚ್ಚು ಜನರಿಗೆ ಊಟ ಹಾಕುತ್ತಿದ್ದೇವೆ’ ಎಂದಿದ್ದಾರೆ ನಟಿ ಸಂಜನಾ. 

ಕಿಟ್​ ವಿತರಣೆ ಮತ್ತು ಅನ್ನದಾನ ಮಾಡುವುದರ ಜತೆಗೆ, ತರಕಾರಿ ಸಹ ಹಂಚಿದ್ದೇನೆ. ನಾನು ಯಾರ ಬಳಿಯೂ ದುಡ್ಡು ಕೇಳಲಿಲ್ಲ. ಕೆಲವರು ತಾವೇ ಮುಂದೆ ಬಂದು, ಆಹಾರ ಸಾಮಗ್ರಿ ಮತ್ತು ತರಕಾರಿಗಳನ್ನು ಕೊಟ್ಟಿದ್ದಾರೆ. ಅದನ್ನು ಫೌಂಡೇಶನ್​ ಮೂಲಕ ಹಂಚಿದ್ದೇನೆ.ಲಾಕ್​ಡೌನ್​ ಮುಗಿಯುವವರೆಗೂ ಸಹಾಯವನ್ನು ಮುಂದುವರೆಸುವುದಕ್ಕೆ ಯೋಚಿಸಿದ್ದೇನೆ ಎಂದಿದ್ದಾರೆ ನಟಿ ಸಂಜನಾ ಗಲ್ರಾನಿ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99