-->
ದಕ್ಷಿಣ ಕನ್ನಡ; ಪೊಲೀಸರ ತಪಾಸಣೆ ವೇಳೆ  ಗೂಡ್ಸ್ ವಾಹನ ಢಿಕ್ಕಿ- ತಾಯಿಯ ಎದುರೆ ಪ್ರಾಣ ಕಳೆದುಕೊಂಡ ಬೈಕ್ ಸವಾರ

ದಕ್ಷಿಣ ಕನ್ನಡ; ಪೊಲೀಸರ ತಪಾಸಣೆ ವೇಳೆ ಗೂಡ್ಸ್ ವಾಹನ ಢಿಕ್ಕಿ- ತಾಯಿಯ ಎದುರೆ ಪ್ರಾಣ ಕಳೆದುಕೊಂಡ ಬೈಕ್ ಸವಾರ

ವಾಹನ ತಪಾಸಣೆ ವೇಳೆ ಬೈಕ್ ಗೆ  ಗೂಡ್ಸ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಆತೂರು ಎಂಬಲ್ಲಿ ನಡೆದಿದೆ.




 ಆತೂರು ಬೈಲು ನಿವಾಸಿ ಹಾರಿಸ್ ಮೃತ ಸವಾರ. ಹಾರಿಸ್  ತನ್ನ ತಾಯಿಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಆತೂರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ  ವಾಹನವನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಡಾಕ್ಯುಮೆಂಟ್ ನೊಂದಿಗೆ  ರಸ್ತೆ ದಾಟುವ ವೇಳೆ ಟಾಟಾ ಏಸ್ ಗೂಡ್ಸ್ ವಾಹನವು ಢಿಕ್ಕಿ ಹೊಡೆದು ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌.
ಸ್ಥಳದಲ್ಲಿ ನೂರಾರು ಜನ ಸೇರಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಕೆಲಸಮಯ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

Ads on article

Advertise in articles 1

advertising articles 2

Advertise under the article