-->

5 ದಿನದ ಬಾಣಂತಿ ಕೊರೋನಾಗೆ ಬಲಿ: ತಬ್ಬಲಿಯಾದವು ಮೂರು ಕಂದಮ್ಮಗಳು

5 ದಿನದ ಬಾಣಂತಿ ಕೊರೋನಾಗೆ ಬಲಿ: ತಬ್ಬಲಿಯಾದವು ಮೂರು ಕಂದಮ್ಮಗಳು

 ಮಂಡ್ಯ: ಐದು ದಿನದ ಬಾಣಂತಿ ಮಹಾಮಾರಿ ಕೊರೋನಾಗೆ ಬಲಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ  ಸಂಭವಿಸಿದೆ.

  ಶಿಲ್ಪಶ್ರೀ ಅವರಿಗೆ ಹೆರಿಗೆ ಆಗಿ 4 ದಿನ ಆಗಿತ್ತಷ್ಟೆ. 5ನೇ ದಿನಕ್ಕೆ ಮಹಾಮಾರಿ ಕರೊನಾಗೆ ಬಾಣಂತಿ ಶಿಲ್ಪಶ್ರೀ ಬಲಿಯಾಗಿದ್ದಾರೆ.
ಶಿಲ್ಪಶ್ರೀ ಅವರ ಪತಿ ಜಿ.ಟಿ.ವೀರೇಶ್​ ಅವರು ಬೆಂಗಳೂರಿನ ರಕ್ತನಿಧಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ದಂಪತಿಗಳು  ಬೆಂಗಳೂರಿನಲ್ಲೇ ವಾಸವಿದ್ದರು. ಈಗಾಗಲೇ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇದೀಗ ಜನಿಸಿರುವ 3ನೇ ಮಗು ಗಂಡು ಮಗುವಾಗಿದ್ದು  ಆ ಮೂರು ಕಂದಮ್ಮಗಳು ತಾಯಿ ಇಲ್ಲದ ತಬ್ಬಲಿಗಳಾಗಿವೆ

 ಶಿಲ್ಪಶ್ರೀ ಗರ್ಭಿಣಿಯಾಗಿರುವಾಗಲೇ ಕರೊನಾ ಸೋಂಕು ತಗುಲಿತ್ತು. ಅವರನ್ನು ಮಂಡ್ಯದ ಕರೊನಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಿಲ್ಪಶ್ರೀ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನ ತೆಗೆದಿದ್ದರು. ಮಗುವಿಗೆ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದ ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ. ತೀವ್ರ ಉಸಿರಾಟ ಸಮಸ್ಯೆಯಿಂದ ಶಿಲ್ಪಶ್ರೀ ಮಂಗಳವಾರ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99