-->

ಓದುಗರ ಗಮನಕ್ಕೆ

ಗಲ್ಪ್ ಕನ್ನಡಿಗ.ಕಾಮ್ ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಗಲ್ಪ್ ಕನ್ನಡಿಗ ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
 ಲವ್ ಜೆಹಾದ್ ಆರೋಪವೊಂದಿದ್ದ ಐಎಎಸ್ ಜೋಡಿ ಎರಡೇ ವರ್ಷದಲ್ಲಿ ವಿಚ್ಚೇದನಕ್ಕೆ ಅರ್ಜಿ! (video)

ಲವ್ ಜೆಹಾದ್ ಆರೋಪವೊಂದಿದ್ದ ಐಎಎಸ್ ಜೋಡಿ ಎರಡೇ ವರ್ಷದಲ್ಲಿ ವಿಚ್ಚೇದನಕ್ಕೆ ಅರ್ಜಿ! (video)




ಜೈಪುರ: ಲವ್ ಜೆಹಾದ್ ಎಂಬ ಆರೋಪವೊಂದಿದ್ದರೂ ಪ್ರೇಮವಿವಾಹವಾಗಿದ್ದ ಐ ಎ ಎಸ್ ಜೋಡಿ ವಿವಾಹ ವಿಚ್ಚೇದನಕ್ಕೆ ಅರ್ಜಿ ಹಾಕಿ ಸುದ್ದಿ ಗ್ರಾಸವಾಗಿದೆ.


2015 ರಲ್ಲಿ ಐ ಎ ಎಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಮದ್ಯಪ್ರದೇಶದ ಟೀನಾ ಮತ್ತು ದ್ವಿತೀಯ ಸ್ಥಾನ ಪಡೆದಿದ್ದ ಜಮ್ಮು ಕಾಶ್ಮೀರದ ಆಥರ್ ನಡುವೆ ಪ್ರೇಮಾಂಕುರವಾಗಿತ್ತು. ಐ ಎಎಸ್ ಪರೀಕ್ಷೆಯಲ್ಲಿ ಟಾಪರ್ ಆದ ಮೊಲದ ದಲಿತ ಯುವತಿ ಎಂದು ಟೀನಾ ಹಿರಿಮೆಗೂ ಪಾತ್ರರಾಗಿದ್ದರು. ತರಬೇತಿ ವೇಳೆ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ಕುಟುಂಬದವರ ಒಪ್ಪಿಗೆ ಪಡೆದು 2018 ರಲ್ಲಿ ಜಮ್ಮು ಕಾಶ್ಮೀರದ ಪಹಲ್ ಗಾಂವ್ ನಲ್ಲಿ ವಿವಾಹವಾಗಿದ್ದರು. ಈ ಮದುವೆಯ ರಿಸೆಪ್ಸನ್ ನಲ್ಲಿ ಉಪರಾಷ್ಟ್ರಪತಿ ಎಂ ವೆಂಕಯ್ಯು ನಾಯ್ಡು, ಆಗಿನ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ , ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕೂಡ ಪಾಲ್ಗೊಂಡಿದ್ದರು.


ಇವರ ಮದುವೆಗೆ ಹಿಂದೂ ಮಹಾಸಭಾ ತೀವ್ರ ವಿರೋಧ ವ್ಯಕ್ತಪಡಿಸಿ ಲವ್ ಜೆಹಾದ್ ಎಂದು ಆರೋಪಿಸಿತ್ತು. ಈ ವಿವಾಹವನ್ನು ರದ್ದು ಪಡಿಸಿ ಟೀನಾ ಅವರು ಖಾನ್ ಕುಟುಂಬಕ್ಕೆ ಮತಾಂತರವಾಗುವುದನ್ನು ತಪ್ಪಿಸುವಂತೆ ಆಕೆಯ ಪೋಷಕರಿಗೆ ಪತ್ರವನ್ನು ಬರೆದಿತ್ತು.


ಟೀನಾ ಅವರು ತನ್ನ ಹೆಸರಿನ ಮುಂದೆ ಖಾನ್ ಸೇರಿಸಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಖಾನ್ ಹೆಸರನ್ನು ತೆಗೆದುಹಾಕಿದ್ದರು. ಐಎಎಸ್ ಟಾಪರ್ ಆಗಿದ್ದ ಈ ಜೋಡಿ ಎರಡೇ ವರ್ಷದಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಕಿಕೊಂಡಿದೆ.

 


 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99