-->

ಮಂಗಳೂರಿನಲ್ಲಿ ತಿಂಗಳುಗಟ್ಟಲೆ ನಿಂತಿದ್ದ ಟಿಪ್ಪರ್ ಬೆಳ್ಳಂಬೆಳ್ಳಗೆ  ಸಾವಿಗೆ ಕಾರಣವಾಯಿತು!

ಮಂಗಳೂರಿನಲ್ಲಿ ತಿಂಗಳುಗಟ್ಟಲೆ ನಿಂತಿದ್ದ ಟಿಪ್ಪರ್ ಬೆಳ್ಳಂಬೆಳ್ಳಗೆ ಸಾವಿಗೆ ಕಾರಣವಾಯಿತು!


(ಗಲ್ಫ್ ಕನ್ನಡಿಗ)ಮಂಗಳೂರು; ಮಂಗಳೂರಿನ ಮರೋಳಿಯಲ್ಲಿ ತಿಂಗಳುಗಟ್ಟಲೆ ಕೆಟ್ಟು ನಿಂತಿದ್ದ ಟಿಪ್ಪರ್ ಲಾರಿ ಯೊಂದು ಇಂದು ಮುಂಜಾನೆ ಓರ್ವನ ಸಾವಿಗೆ ಕಾರಣವಾಗಿದೆ.

(ಗಲ್ಫ್ ಕನ್ನಡಿಗ)ಈ ಟಿಪ್ಪರ್ ಹಲವು ಸಮಯಗಳಿಂದ ಹಳೆ ಮಂಗಳೂರು ಗ್ರಾಮಾಂತರ ಪೊಲೀಸ್  ಠಾಣೆ ಸಮೀಪ ನಿಂತುಕೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ನಿಂತುಕೊಂಡಿದ್ದ ಈ ಲಾರಿಗೆ ಇಂದು ಮುಂಜಾನೆ ರಿಕ್ಷಾವೊಂದು ಢಿಕ್ಕಿ ಹೊಡೆದಿದೆ.

(ಗಲ್ಫ್ ಕನ್ನಡಿಗ)ಮಂಗಳೂರು ಬಂದರಿನಿಂದ ಮೀನು ಕೊಂಡೊಯ್ಯುತ್ತಿದ್ದ ರಿಕ್ಷಾ ನಿಯಂತ್ರಣ ತಪ್ಪಿ ಈ ಟಿಪ್ಪರ್ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದೆ. ರಿಕ್ಷಾದಲ್ಲಿದ್ದ ವಳಚಿಲ್ ನ  ಸಲೀಂ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

(ಗಲ್ಫ್ ಕನ್ನಡಿಗ)ಘಟನೆಯ ಬಳಿಕ ಈ ಟಿಪ್ಪರ್ ಲಾರಿಯನ್ನು ತೆರವುಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ.


(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99