-->

ಉಡುಪಿ ದೋಣಿ ದುರಂತ; ಓರ್ವ ಮೀನುಗಾರನ ಮೃತದೇಹ ಪತ್ತೆ

ಉಡುಪಿ ದೋಣಿ ದುರಂತ; ಓರ್ವ ಮೀನುಗಾರನ ಮೃತದೇಹ ಪತ್ತೆ


(ಗಲ್ಪ್ ಕನ್ನಡಿಗ)ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಡೆರಿಯಲ್ಲಿ ನಿನ್ನೆ ನಡೆದ ದೋಣಿ ದುರಂತದಲ್ಲಿ ನೀರುಪಾಲಾದ  ಓರ್ವ ಮೀನುಗಾರನ ಮೃತದೇಹ ಸಿಕ್ಕಿದೆ.

ನಾಪತ್ತೆಯಾಗಿದ್ದ ನಾಗರಾಜ್ ಖಾರ್ವಿ ಮೃತದೇಹ ಉಡುಪಿ ಜಿಲ್ಲೆಯ ಕೊಡೆರಿ ಹೊಸಹಿತ್ಲು ಸಮುದ್ರ ತೀರದಲ್ಲಿ ಪತ್ತೆಯಾಗಿದೆ.



(ಗಲ್ಪ್ ಕನ್ನಡಿಗ)ಸಾಗರಶ್ರೀ ಎಂಬ ನಾಡದೋಣಿಯಲ್ಲಿ 9 ಮಂದಿ ಮೀನುಗಾಗರರು ನಿನ್ನೆ ಬೆಳಿಗ್ಗೆ 10.30 ರ ಸುಮಾರಿಗೆ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದ ದೈತ್ಯ ಅಲೆಗೆ ದೋಣಿ ಸಿಲುಕಿ ಮಗುಚಿ ಬಿದ್ದ ಪರಿಣಾಮ ದೋಣಿಯಲ್ಲಿದ್ದ ಲಕ್ಷ್ಮಣ್ ಖಾರ್ವಿ, ಶೇಖರ್, ಮಂಜುನಾಥ್ , ನಾಗರಾಜ್ ಖಾರ್ವಿ ನೀರುಪಾಲಾಗಿದ್ದರು. ಉಳಿದ ಮೀನುಗಾರರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪತ್ತೆಯಾದ ಇನ್ನೂ ‌ಮೂವರ ಶೋಧಕಾರ್ಯ ನಡೆಯುತ್ತಿದೆ.


(ಗಲ್ಪ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99