ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಸುಜಾತ ಗಜೇಂದ್ರ ಜೈನ್ ಸಾಗರ ಅವರ ಕವನ "ಉಳುಮೆ"

 

ಸುಜಾತ ಗಜೇಂದ್ರ ಜೈನ್ ಸಾಗರ ✍️

 

ಜೋಡೆತ್ತಿನ ನೊಗಕ್ಕೆ ಊರೆತ್ತಿನ ಸಿಂಗಾರ.

ಎತ್ತಲಾರದ ತಲೆಗೆ ನೊಗವೇ ಹೆಗಲಿಗೆ ಭಾರ.

ಬಿಸಿಲು ಮಳೆ ಎನ್ನದೇ ಉಳುಮೆಯ

ದೇ ಸಾರ.

ಹಿಡಿದು ಬೆದರಿಸುವನು ಆಗಾಗ ಮೂಗುದಾರ.


ಕಾಲ್ಕಿತ್ತು ಎಳೆಯಲಾರ ಆದರೂ ಮಣ್ಣಲಿ ಆದ್ರ ಪ್ರೀತಿಯ ಮಾತು.

ಯಾವ ಪಾಠದಲ್ಲಿ ತ್ತು ತಿಳಿಯದು ಸಿರಿ ಸ್ವತ್ತು.

ನೋಡುಗರಿಗೆ ಕಂಬಳದಲ್ಲಿ ಸಂಭ್ರಮದ ಮನೆಮಾತು.

ಹಾಗಿತ್ತು....! ಹೀಗಿತ್ತು...! ಒಟ್ಟಾರೆ ಕಣ್ಣಿಗೆ ಗಮ್ಮತ್ತು.


ನೊಗಕೆ ಹೆಗಲು ಭಾರವೋ.., ಹೆಗಲಿಗೆ ಜೊತಗ ಭಾರವೋ.,

ಇದರೊಳಗೆನಡುಗಿದೆ....ಜೀವನ ಮಣಭಾರವೋ....

ಚಾಟಿ ಯೊಳಗಿನ ಕಾವೋ,ಮೀಟಿ ನಿಂತ ನೋವೋ....

ನೋಟದ ಆನಂದದಿ ಮನದ ನೋವ ಮರೆಸುವ ಸಾವೋ....


ಚರಿತ್ರೆಯಾಗಬಹುದು ನೊಗದೊಳಗಿನ ನಂಟು.

ಜೊತೆಯಾಗಿವೆ ಇಂದು ಯಂತ್ರಗಳ ಅಂಟು.

ಉಪ್ಪರಿಗೆ ಸೇರಿವೆ ಇಂದು ನೊಗಗಳ ಗಂಟು.

ಜೋಡೆತ್ತಿಗೂ ಬರ ವಾಗಿದೆ ಅದರೊಳಗು ಸಾರವುಂಟು.




ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW