-->

ಓದುಗರ ಗಮನಕ್ಕೆ

ಗಲ್ಪ್ ಕನ್ನಡಿಗ.ಕಾಮ್ ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಗಲ್ಪ್ ಕನ್ನಡಿಗ ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ತಿಂಗಳಿಗೆ 50 ಸಾವಿರಕ್ಕೂ ಅಧಿಕ salary ಪಡೆಯುತ್ತಿದ್ದವನಿಗೆ ಈಗ ದಿನಕ್ಕೆ 63 ರೂ. ಕೂಲಿ

ತಿಂಗಳಿಗೆ 50 ಸಾವಿರಕ್ಕೂ ಅಧಿಕ salary ಪಡೆಯುತ್ತಿದ್ದವನಿಗೆ ಈಗ ದಿನಕ್ಕೆ 63 ರೂ. ಕೂಲಿ

ತಿರುವನಂತಪುರಂ: ಹೆಚ್ಚುವರಿ ವರದಕ್ಷಿಣೆ ಗಾಗಿ ತನ್ನ ಹೆಂಡತಿಯನ್ನು ಪೀಡಿಸಿ ಆಕೆಯ ಆತ್ಮಹತ್ಯೆಗೆ ಕಾರಣನಾದ ಕೇರಳ ಮೋಟಾರು ವೆಹಿಕಲ್ ಡಿಪಾರ್ಟ್ಮೆಂಟ್ ಉದ್ಯೋಗಿ ಸದ್ಯ ಶಿಕ್ಷೆ ಪ್ರಕಟಗೊಂಡು ಜೈಲು ಸೇರಿದ್ದು, ಜೈಲಿನಲ್ಲಿ ಗಾರ್ಡನಿಂಗ್ ಕೆಲಸ ಮಾಡುತ್ತಿದ್ದಾನೆ. ಈ ಕೆಲಸಕ್ಕಾಗಿ ಆತನಿಗೆ ದಿನಂಪ್ರತಿ 63 ರೂ ಕೂಲಿ ಸಿಗಲಿದೆ.
ಕೊಲ್ಲಂ ಜಿಲ್ಲೆಯ ಮೋಟಾರು ವೆಹಿಕಲ್ ಡಿಪಾರ್ಟ್ಮೆಂಟ್ ನಲ್ಲಿ ಉದ್ಯೋಗಿಯಾಗಿದ್ದ ಕಿರಣ್‌ ಗೆ ಕೈತುಂಬಾ ಸಂಬಳ ಇತ್ತು. ಈತನ ಮದುವೆ 2020ರಲ್ಲಿ ವಿಸ್ಮಯಾ ಎಂಬ ವೈದ್ಯೆ ಜೊತೆ ನಡೆದಿತ್ತು. ಬಳಿಕ ದೊರೆತ ವರದಕ್ಷಿಣೆ ಕಡಿಮೆಯಾಗಿದೆ, ನೀಡಿದ ಕಾರು ಕಡಿಮೆ ಮೊತ್ತದ್ದು ಎಂದು ಕಿರಣ್ ತಗಾದೆ ತೆಗೆದು ವಿಸ್ಮಯಳಿಗೆ ಕಿರುಕುಳ ನೀಡುತ್ತಿದ್ದ.

ಗಂಡನ ಹಣದಾಹ ಮತ್ತು ಕಿರುಕುಳ ಸಹಿಸದೇ 2021 ಜೂನ್​ 21ರ ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿಯೇ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. 

ಪ್ರಕರಣ ವಿಚಾರಣೆ ನಡೆಸಿದ್ದ ಕೊಲ್ಲಂನ ಜಿಲ್ಲಾ ನ್ಯಾಯಾಲಯ ಕಿರಣ್​ಗೆ ಮೂರು ಸೆಕ್ಷನ್‌ (ಐಪಿಸಿ 304-ಹತ್ತು ವರ್ಷ, 306-ಆರು ವರ್ಷ, 498-ಎರಡು ವರ್ಷ) ಅಡಿಯಲ್ಲಿ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಎಲ್ಲ ಪ್ರಕರಣಗಳಲ್ಲಿ ಕಿರಣ್​ ಒಟ್ಟಿಗೆ ಶಿಕ್ಷೆಯನ್ನು ಅನುಭವಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಗರಿಷ್ಠ 10 ವರ್ಷದ ಜೈಲು ಶಿಕ್ಷೆಗೆ ಒಳಗಾಗಿದ್ದ. ಇದಲ್ಲದೆ 12.5 ಲಕ್ಷ ದಂಡ ಪಾವತಿಸಬೇಕಿದೆ.

ಸದ್ಯ ಕಿರಣ್ ಪುಜಾಪ್ಪುರದ ಕೇಂದ್ರ ಕಾರಾಗೃಹದ ಐದನೇ ಬ್ಲಾಕ್​ನ ಕೈದಿಯಾಗಿದ್ದಾನೆ. ಇಲ್ಲಿ ಪ್ರತಿದಿನ ಬೆಳಗ್ಗೆ 7 ಗಂಟೆಗೆ  ಜೈಲಿನ ತೋಟದಲ್ಲಿ ಕೆಲಸ ಮಾಡುತ್ತಾನೆ. ಇದಕ್ಕಾಗಿ 63 ರೂಪಾಯಿ ದಿನಗೂಲಿಯನ್ನು ಪಡೆಯುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99