![ಉಡುಪಿ-ಕಾಂಗ್ರೆಸ್ಗೆ ಮುನಿಯಾಲು ಉದಯ ಶೆಟ್ಟಿ ರಾಜೀನಾಮೆ ?? ಉಡುಪಿ-ಕಾಂಗ್ರೆಸ್ಗೆ ಮುನಿಯಾಲು ಉದಯ ಶೆಟ್ಟಿ ರಾಜೀನಾಮೆ ??](https://lh3.googleusercontent.com/-DWk0eXl6UZg/YnKm5Ogm62I/AAAAAAAAVGg/GjcJ7s2dAdg3YQ5dmVu2TxyGd24LMQniQCNcBGAsYHQ/s1600/1651680991886083-0.png)
ಉಡುಪಿ-ಕಾಂಗ್ರೆಸ್ಗೆ ಮುನಿಯಾಲು ಉದಯ ಶೆಟ್ಟಿ ರಾಜೀನಾಮೆ ??
Wednesday, May 4, 2022
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ಮುನಿಯಾಲು ಉದಯ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲೇ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುನಿಯಾಲು ಉದಯ ಶೆಟ್ಟಿ ಅವರ ಮುಂದಿನ ನಡೆ ಏನು ಎಂಬುದು ಅವರ ಬೆಂಬಲಿಗರಲ್ಲಿ ಕುತೂಹಲ ಮೂಡಿಸಿದ್ದು, ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎನ್ನುವ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಆದ್ರೆ ಈ ಬಗ್ಗೆ
ಮುನಿಯಾಲು ಉದಯ ಶೆಟ್ಟಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದಾರೆ..