-->

ಅಭಿಮಾನಿ ನೀಡಿದ ಕುರಿಯನ್ನು ತಿರಸ್ಕರಿಸಿದ ಸಿದ್ದು: ಗಿಫ್ಟ್ ಬೇಡ ಅನ್ನಲು ಕಾರಣವಾಯ್ತು ಕುರಿಯ ಕತ್ತಿನಲ್ಲಿದ್ದ ಆ ಬೋರ್ಡ್

ಅಭಿಮಾನಿ ನೀಡಿದ ಕುರಿಯನ್ನು ತಿರಸ್ಕರಿಸಿದ ಸಿದ್ದು: ಗಿಫ್ಟ್ ಬೇಡ ಅನ್ನಲು ಕಾರಣವಾಯ್ತು ಕುರಿಯ ಕತ್ತಿನಲ್ಲಿದ್ದ ಆ ಬೋರ್ಡ್

ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಗೆ ಅಭಿಮಾನಿಯೋರ್ವ ನೀಡಿದ ಪ್ರೀತಿಯ ಕಾಣಿಕೆಯನ್ನು ಅವರು ನಯವಾಗಿ ತಿರಸ್ಕರಿಸಿದ ಘಟನೆ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ.
ಇಲ್ಲಿನ ಜೆ.ಎಂ. ಕೊರಬು ಫೌಂಡೇಶನ್​ ನಡೆಸಿದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯರಿಗೆ ಅಭಿಮಾನಿ ರಮೇಶ್​ ಎಂಬವರು ಮೇಕೆಯೊಂದನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ.

ಆದರೆ ಈ ಮೇಕೆಯನ್ನು ಸಿದ್ದರಾಮಯ್ಯ ನಯವಾಗಿ ತಿರಸ್ಕರಿಸಿದರು. ಯಾಕೆ ಗೊತ್ತಾ? ಮೇಕೆಯ ಕುತ್ತಿಗೆಯಲ್ಲಿ 'ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ' ಎಂದು ಬೋರ್ಡ್ ಹಾಕಲಾಗಿತ್ತು. ಇದರಿಂದ  ಸಿದ್ದರಾಮಯ್ಯ ಗಲಿಬಿಲಿಗೊಂಡಿದ್ದು, ಈ ಉಡುಗೊರೆ ಸ್ವೀಕರಿಸಲು ನಿರಾಕರಿಸಿದ್ದಾರೆ.

ವೇದಿಕೆಯಲ್ಲಿದ್ದ ಇತರೆ ಗಣ್ಯರು ಒತ್ತಾಯ ಮಾಡಿದರೂ ಸಹ ಸಿದ್ದರಾಮಯ್ಯ ಮಾತ್ರ ಈ ಉಡುಗೊರೆ ಸ್ವೀಕರಿಸಲು ಸುತಾರಾಂ ಒಪ್ಪಿಲ್ಲ. 

ಸಿದ್ದರಾಮಯ್ಯ ಉಡುಗೊರೆ ಸ್ವೀಕರಿಸದ ಹಿನ್ನೆಲೆ ನಿರಾಶೆಯಿಂದ ಅಭಿಮಾನಿ ರಮೇಶ್​ ಮೇಕೆಯನ್ನು ವಾಪಸ್​ ಕೊಂಡೊಯ್ದಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99