ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ವೀಡಿಯೋಗಾಗಿ ಕಿತ್ತಾಟ ಹೋಯಿತು ಪ್ರಾಣ! ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿತ್ತು?

 ತಿರುವನಂತಪುರಂ: ಒಂದೇ ಒಂದು ವೀಡಿಯೋಗಾಗಿ ಕಿತ್ತಾಟ ನಡೆಸಿ ನಂತರ ಪತಿ ಹಚ್ಚಿದ ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದು ಗಂಭೀರವಾಗಿ ಗಾಯಗೊಂಡು ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

 ಮೃತಳನ್ನು 28 ವರ್ಷದ ಅಥಿರಾ ಎಂದು ಗುರುತಿಸಲಾಗಿದೆ. ಈಕೆ ಶಾನವಾಸ್​ ಎಂಬಾತನ ಜತೆ ಲಿವ್ ಇನ್ ರಿಲೇಶನ್​ನಲ್ಲಿದ್ದಳು. ಅಥಿರಾ ವಿಡಿಯೋವೊಂದರ ಕುರಿತು ಇಬ್ಬರ ನಡುವೆ ಜಗಳ ನಡೆದಿತ್ತು. ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿ  ಶಾನವಾಸ್​, ಅಥಿರಾ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ತಾನೂ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. 

ಅಥಿರಾ ಮತ್ತು ಶಾನವಾಸ್​ಗೆ 6 ತಿಂಗಳ ಮಗುವಿದೆ. ಘಟನೆ ನಡೆದಾಗ ಮಗು ಮನೆಯಲ್ಲಿಯೇ ಇತ್ತು. ಚಿಕಿತ್ಸೆ ನಡೆಯುವಾಗಲೇ ಆಕೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಇಬ್ಬರ ನಡುವೆ ಜಗಳ ನಡೆಯುವಾಗ ಶಾನವಾಸ್​ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಎಂದು ಹೇಳಿದ್ದಾಳೆ. ಅದೇ ಆಸ್ಪತ್ರೆಯಲ್ಲಿ ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಅಥಿರಾ ಹೇಳಿಕೆ ದಾಖಲಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳು

ನಮ್ಮ ಚಂದಾದಾರರಾಗಿ (Subscribe Now)

Daily Plan

₹1 / 1 Day

Get full access to all premium news for 24 hours.

POPULAR

Weekly Plan

₹6 / 7 Days

Full access to Gulf Kannadiga news for one entire week.

Monthly Plan

₹25 / 30 Days

Best value for regular readers. Full monthly access.

* Payment system is being integrated. Please check back later.

×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW