ಬ್ರೇಕಿಂಗ್ ನ್ಯೂಸ್
ಲೋಡ್ ಆಗುತ್ತಿದೆ...

ಮಂಗಳೂರಿನಲ್ಲಿಯೂ ಭಯೋತ್ಪಾದಕರ ಕರಿನೆರಳು; ಕಾಣಿಸಿಕೊಂಡಿತು ಉಗ್ರ ಬರಹ


(ಗಲ್ಫ್ ಕನ್ನಡಿಗ)ಮಂಗಳೂರು; ಮಂಗಳೂರಿನಲ್ಲಿ ಉಗ್ರರ ಪರ ಚಟುವಟಿಕೆಗಳು ಮತ್ತೆ ಬೆಚ್ಚಿ ಬೀಳಿಸಿದೆ.

(ಗಲ್ಫ್ ಕನ್ನಡಿಗ)ಮಂಗಳೂರಿನ ಕದ್ರಿಯಲ್ಲಿ ಇಂದು ಬೆಳಿಗ್ಗೆ ಉಗ್ರರ ಬರಹಗಳು ಗೋಡೆಯಲ್ಲಿ ಕಾಣಿಸಿಕೊಂಡಿದೆ. ಲಷ್ಕರ್ ಜಿಂದಾಬಾದ್ ಎಂಬ ಬರಹ ಗೋಡೆಯಲ್ಲಿ ಕಾಣಿಸಿಕೊಂಡಿದ್ದು ಉಗ್ರರ ಜೊತೆಗೆ ಸಂಪರ್ಕದಲ್ಲಿರುವವರು ಮಂಗಳೂರಿನಲ್ಲಿ ಇದ್ದಾರೆ ಎಂಬುದಕ್ಕೆ ಪುಷ್ಟಿ ನೀಡಿದೆ

ಡು ನಾಟ್ ಫೋರ್ಸ್ ಅಸ್ ಟು ಇನ್ವೈಟ್  ಲಷ್ಕರ್ ಇ ತೋಯ್ಬ ಆ್ಯಂಡ್ ತಾಲಿಬಾನ್ ಟು ಡೀಲ್ ವಿದ್ ಸಂಘಿಸ್ ಆ್ಯಂಡ್  ಮ್ಯಾನ್ವೆಡಿಸ್ ಎಂದು ಬರೆಯಲಾಗಿದ್ದು  ಇದರ ಕೆಳಗೆ ಲಷ್ಕರ್ ಜಿಂದಾಬಾದ್ ಎಂದು ಬರೆಯಲಾಗಿದೆ.

(ಗಲ್ಫ್ ಕನ್ನಡಿಗ)ಈ ಬರಹ ಗಮನಕ್ಕೆ ಬರುತ್ತಿದ್ದಂತೆ  ಸ್ಥಳಕ್ಕೆ ಆಗಮಿಸಿದ ಪೊಲೀಸರು ಅದರ ಮೇಲೆ ಪೈಂಟ್ ಹಾಕಿ ಗೋಣಿಯಿಂದ ಮುಚ್ಚಿದ್ದಾರೆ.

(ಗಲ್ಫ್ ಕನ್ನಡಿಗ)
ಇತ್ತೀಚಿನ ಸುದ್ದಿಗಳು
×

WhatsApp Group

ಕ್ಷಣ ಕ್ಷಣದ ಸುದ್ದಿಗಳನ್ನು ವಾಟ್ಸಪ್‌ನಲ್ಲಿ ಪಡೆಯಿರಿ.

JOIN NOW