
UDUPI : ಮನೆಯವರು ವಿದೇಶಕ್ಕೆ ತೆರಳಿದಾದ ಕಳ್ಳತನ : ಸಿಸಿ ಟಿವಿಯಲ್ಲಿ ಕಳ್ಳನ ಚಲನವಲನ ಸೆರೆ
ಮನೆಯವರು ವಿದೇಶಕ್ಕೆ ಹೋಗಿದಾಗ, ರಾತ್ರಿ ವೇಳೆ
ಮನೆಗೆ ನುಗ್ಗಿದ ಕಳ್ಳರು ದೇವರ ಕೋಣೆಯಲ್ಲಿದ್ದ ಬೆಳ್ಳಿಯ ದೇವರ ಪೀಠ, ಬೆಳ್ಳಿಯ ಸಣ್ಣ ತಟ್ಟೆ, ಬೆಳ್ಳಿಯ ಅರಶಿನ ಕುಂಕುಮ ಬೌಲ್, ಬೆಳ್ಳಿಯ ಸಣ್ಣ ಕುಂಕುಮ ಕರಡಿಗೆ, ಬೆಳ್ಳಿಯ ಗಣಪತಿಯ ಪೀಠ ಸೇರಿ ಒಟ್ಟು 845 ಗ್ರಾಂ ತೂಕದ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿದ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದಿದೆ.
ಸುರಾಲು ನಾರಾಯಣ ಮಡಿ ಎಂಬವರು ಕುಟುಂಬ ಸಮೇತ ನೇಪಾಳಕ್ಕೆ ಪ್ರವಾಸ ಹೋಗಿದ್ದು, ಈ ಸಮಯಲ್ಲಿ ಮನೆಯ ಮುಖ್ಯದ್ವಾರದ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಕರಾಮತ್ತು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಳವಾದ ಸೊತ್ತುಗಳ ಮೌಲ್ಯ 64000 ರೂ. ಎಂದು ಅಂದಾಜಿಸಲಾಗಿದೆ.