Header Ad

ಉಡುಪಿ- ವಕೀಲರ ಮೇಲೆ ಕೋರ್ಟ್ ಆವರಣದಲ್ಲಿ ಹಲ್ಲೆ


ಉಡುಪಿ ನಗರದಲ್ಲಿ ಇರುವ ಕೋರ್ಟ್ ಆವರಣಲ್ಲಿ ಕೊಲೆ ಕೇಸ್ ಆರೋಪಿಯೊಬ್ಬ  ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.  




ಶಾಹೀದ್ ಮಂಚಿ ವಕೀಲರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ.  ಗುರು ಹಲ್ಲೆಗೊಳಗಾದ ವಕೀಲರು.  ಕೋರ್ಟ್ ಆವರಣದಲ್ಲಿ ಆರೋಪಿ ಮತ್ತು ವಕೀಲರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಶಾಹೀದ್ ಹಲ್ಲೆ ನಡೆಸಿದ್ದಾನೆ.


ಘಟನೆ ಸ್ಥಳಕ್ಕೆ ಉಡುಪಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಶಾಹೀದ್‌ನನ್ನು  ಬಂಧಿಸಿದ್ದಾರೆ. ಉಡುಪಿ ಕೋರ್ಟ್ ಆವರಣದಲ್ಲಿ ವಕೀಲರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ವಕೀಲರ ಸಂಘದಿಂದ ಬಹಳ ಆಕ್ರೋಶ ವ್ಯಕ್ತವಾಗಿದೆ.



ಇತ್ತೀಚಿನ ಸುದ್ದಿಗಳು