-->

ವಯಸ್ಸು ಇನ್ನೂ 23, ಆದರೂ 200 ಯುವತಿಯರಿಗೆ, 100 ಮಹಿಳೆಯರಿಗೆ ವಂಚನೆ: ಹಾಗಾದಾರೆ ಇವ ಎಂಥಹ ಚಾಲಕಿ?

ವಯಸ್ಸು ಇನ್ನೂ 23, ಆದರೂ 200 ಯುವತಿಯರಿಗೆ, 100 ಮಹಿಳೆಯರಿಗೆ ವಂಚನೆ: ಹಾಗಾದಾರೆ ಇವ ಎಂಥಹ ಚಾಲಕಿ?

ವಿಜಯವಾಡ: ಇನ್ನೂ 23 ವರ್ಷ ವಯಸ್ಸಿನ ಈ ಸ್ಪುರದ್ರುಪಿ ಯುವಕ ಒಂದಲ್ಲ ಎರಡಲ್ಲ ಬರೋಬ್ಬರಿ 200 ಯುವತಿಯರು, 100 ವಿವಾಹಿತ ಮಹಿಳೆಯರಿಗೆ ವಂಚಿಸಿದ್ದಾನೆ ಅಂದರೆ ಯಾರಾದರೂ ನಂಬುವುದು ಕಷ್ಟ. ಆದರೂ ಇದು ಸತ್ಯ.

ಚೆನ್ನುಪಲ್ಲಿ ಪ್ರಸನ್ನಕುಮಾರ್​ ಅಲಿಯಾಸ್​ ಪ್ರಶಾಂತಿ ರೆಡ್ಡಿ ಅಲಿಯಾಸ್​ ರಾಜರೆಡ್ಡಿ ಅಲಿಯಾಸ್​ ಟೋನಿ (23) ಇಷ್ಟೂ ಹೆಸರಿನಿಂದ ವಂಚನೆಗೈಯ್ಯುತ್ತಿದ್ದ ಈ ಖತರ್ನಾಕ್​ ಯುವಕ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಪ್ರೊದ್ದತುರ್​ ಗೀತಾಶ್ರಮ್ ಸ್ಟ್ರೀಟ್​ ಪ್ರದೇಶದವ. ಪ್ರಥಮ ವರ್ಷದ ಬಿ.ಟೆಕ್ ಅನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ಪ್ರಸನ್ನ ಕುಮಾರ್, 2017ರಿಂದ ಐಷಾರಾಮಿ ಪಾರ್ಟಿಗಳಲ್ಲಿ ಸರಗಳ್ಳತನ ಮಾಡಲು ಆರಂಭಿಸಿದ್ದಾನೆ. ಈಗಾಗಲೇ ಅನೇಕ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿ ಜಾಮೀನು ಪಡೆದು ಹೊರ ಬಂದಿದ್ದಾನೆ. ​​ 

ಪ್ರಸನ್ನ ಕುಮಾರ್ ಗೆ 2020ರಲ್ಲಿ ಶೇರ್​ಚಾಟ್​ ಮೂಲಕ ಶ್ರೀನಿವಾಸ್ ಎಂಬವರ ಪರಿಚಯವಾಗುತ್ತದೆ. ಶ್ರೀನಿವಾಸ್​ಗೆ ಪ್ರಶಾಂತ್​ ರೆಡ್ಡಿ ಅಲಿಯಾಸ್​ ರಾಜರೆಡ್ಡಿ ಎಂಬ ಹೆಸರಿನಿಂದ ಪ್ರಸನ್ನ ಪರಿಚಿತನಾಗುತ್ತಾನೆ. ಹೈದರಬಾದ್​ನ ಸೆಕ್ರೆಟರಿಯಟ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ಮತ್ತು ತನಗೆ ಅನೇಕ ಗಣ್ಯರ ಪರಿಚಯ ಇರುವುದಾಗಿ ಹೇಳಿಕೊಳ್ಳುತ್ತಾನೆ. ಸೆಕ್ರೆಟರಿಯಟ್​ನಲ್ಲಿ ಶ್ರೀನಿವಾಸ್ ಗೂ ಕ್ಲರ್ಕ್​ ಹುದ್ದೆ ಕೊಡಿಸುವುದಾಗಿ ನಂಬಿಸುತ್ತಾನೆ. ಈ ನಡುವೆ ಪ್ರಸನ್ನ ಕುಮಾರ್ ತನ್ನ ತಾಯಿ ಆರೋಗ್ಯ ಸರಿಯಿಲ್ಲ ಎಂದು ಶ್ರೀನಿವಾಸ್ ಬಳಿ ಚಿಕಿತ್ಸೆಗೆ ಹಣ ಕೇಳುತ್ತಾನೆ. ಶ್ರೀನಿವಾಸ್​ ಈ ವಿಚಾರವನ್ನು ತನ್ನ ತಾಯಿಯ ಬಳಿ ಹೇಳಿದ್ದನೆ. ಆಕೆ ಹೇಗಿದ್ದರೂ ಮಗನಿಗೆ ಕೆಲಸ ಸಿಗುತ್ತದೆ ಎಂದು ನಂಬಿ ಆಕೆ ಚಿನ್ನದ ಸರ ಮತ್ತು ತಾಳಿಯನ್ನು ಮಾರಿ ಹಣ ಕೊಡುತ್ತಾಳೆ. ಹಣವನ್ನು ಸ್ವೀಕರಿಸುವ ಪ್ರಸನ್ನ ಕುಮಾರ್ ಅಂದಿನಿಂದ ಯಾವುದೇ ಕರೆಯನ್ನು ಸ್ವೀಕರಿಸುವುದೇ ಇಲ್ಲ. ಇದರ ನಡುವೆ ಕಡಪ ಜಿಲ್ಲೆಯ ಅಕ್ಕಯಪಲ್ಲೆಯಲ್ಲಿರುವ ಮನೆಯೊಳಗೆ ನುಗ್ಗಿ, ಲಾಕರ್​ ಹೊಡೆದು ಅದರಲ್ಲಿದ್ದ 30 ಗ್ರಾಂ ಚಿನ್ನದೊಡವೆ​, ಕಿವಿಯೋಲೆಗಳು, ಎರಡು ಉಂಗುರಗಳನ್ನು ಪ್ರಸನ್ನ ಕಳ್ಳತನ ಮಾಡಿರುತ್ತಾನೆ. ಇದೇ ಸಂದರ್ಭದಲ್ಲಿ ತಾವು ಮೋಸ ಹೋಗಿರುವುದು ಶ್ರೀನಿವಾಸ್​ಗೆ ತಿಳಿದು ದೂರು ನೀಡುತ್ತಾರೆ.

ಬಳಿಕ ಪ್ರಸನ್ನಕುಮಾರ್​ ರೆಡ್ಡಿಯನ್ನು ಪೊಲೀಸರು ಬಂಧಿಸುತ್ತಾರೆ. ಇದಾದ ಬಳಿಕ ಪ್ರಸನ್ನ ಕುಮಾರ್​ ವಿಚಾರಣೆಗೆ ಕೈಗೆತ್ತಿಕೊಳ್ಳುವ ಪೊಲೀಸರಿಗೆ ಆತನ ಸ್ಮಾರ್ಟ್​ಫೋನ್​ ನೋಡಿ ಶಾಕ್​ ಆಗುತ್ತದೆ. ಬಳಿಕ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸುತ್ತಾರೆ. ಬಿ.ಟೆಕ್​ ಅರ್ಧಕ್ಕೆ ಮೊಟಕುಗೊಳಿರುವ ಪ್ರಸನ್ನ ಕುಮಾರ್ ಇನ್​ಸ್ಟಾಗ್ರಾಂ, ಫೇಸ್​ಬುಕ್​ ಮತ್ತು ಶೇರ್​ಚಾಟ್​ನಂತಹ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಮಧ್ಯಮ ವಯಸ್ಸಿನ ಮಹಿಳೆಯರಿಗೆ ವಂಚಿಸಿರುವುದು ಬೆಳಕಿಗೆ ಬರುತ್ತದೆ.

ಪ್ರಸನ್ನ ಕುಮಾರ್ ಮೊದಲಿಗೆ, ವಿವಾಹಿತ ಮಹಿಳೆಯರು ಮತ್ತು ಯುವತಿಯರನ್ನು ತನ್ನ ಮರುಳು ಮಾಡುವ ಅಥವಾ ಆಕರ್ಷಕ ಮಾತುಗಳ ಮೂಲಕ ಪ್ರೀತಿಯ ಬಲೆಗೆ ಕೆಡವುತ್ತಾನೆ. ಬಳಿಕ ಅವರೊಂದಿಗೆ ಕೆಟ್ಟದಾಗಿ ಮತ್ತು ಡಬ್ಬಲ್​ ಮೀನಿಂಗ್​ ಡೈಲಾಗ್​ಗಳನ್ನು ಮಾತನಾಡುತ್ತಿದ್ದ ಎಂಬ ಅಂಶ ಬಯಲಾಗುತ್ತದೆ. ಅವಕಾಶ ಇರುವವರೊಂದಿಗೆ ನಿಕಟ ಸಂಪರ್ಕದಲ್ಲಿ ಸಮಯ ಕಳೆಯುತ್ತಿದ್ದ. ಅಲ್ಲದೆ ಮಹಿಳೆಯರೊಂದಿಗೆ ಸಲುಗೆಯಿಂದ ಇರುವ ಅರೆಬೆತ್ತಲೆ ಮತ್ತು ಬೆತ್ತಲೆ ಫೋಟೋ ಹಾಗೂ ವೀಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದ. ಎಲ್ಲಾ ಚಿತ್ರಗಳನ್ನು ಸೇವ್​ ಮಾಡಿಟ್ಟುಕೊಂಡಿದ್ದ ಆರೋಪಿ ಮಹಿಳೆಯರನ್ನು ಬ್ಲಾಕ್​ಮೇಲ್​ ಮಾಡಲು ಆರಂಭಿಸಿತ್ತಾನೆ. ಬಳಿಕ ಅವರನ್ನು ಬೆದರಿಸಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿ ಚಿನ್ನಾಭರಣವನ್ನು ಸುಲಿಗೆ ಮಾಡಿ, ಮಾರಾಟ ಮಾಡಿದ ಹಣ ಪಡೆದುಕೊಳ್ಳುತ್ತಾನೆ ಎಂಬ ಅಂಶ ಬೆಳಕಿಗೆ ಬಂದಿದೆ.

ಮರ್ಯಾದೆಗೆ ಅಂಜಿ ಆತನ ವಿರುದ್ಧ ದೂರು ಕೊಡಲು ಯಾರೂ ಮುಂದೆ ಬಂದಿಲ್ಲ. ಇದು ಒಂದು ರೀತಿಯಲ್ಲಿ ಆತನಿಗೆ ವರವಾಗಿತ್ತು. ಇದೀಗ ಉದ್ಯೋಗ ಕೊಡಿಸುವ ನೆಪದಲ್ಲಿ ಹಣ ಪಡೆದ ಶ್ರೀನಿವಾಸ್​ಗೆ ವಂಚನೆ ಮಾಡಿದ​ ಪ್ರಕರಣದಲ್ಲಿ ಪ್ರಸನ್ನ ಸಿಕ್ಕಿಬಿದ್ದಿದ್ದಾನೆ. ಬಳಿಕ ಪೊಲೀಸ್​ ವಿಚಾರಣೆಯಲ್ಲಿ ಸುಮಾರು 100 ಮಹಿಳೆಯರು ಮತ್ತು 200 ಯುವತಿಯರಿಗೆ ಪ್ರಸನ್ನ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಆತನಿಂದ 1.26 ಲಕ್ಷ ರೂ. ನಗದು ಮತ್ತು 30 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99