
ಸತ್ತಿದೆ ಎಂದು ತಿಳಿದಿದ್ದ ಮಗುವಿಗೆ ಬಂತು ಜೀವ..! ಏನು ಈ ಆಶ್ಚರ್ಯಕರ ಘಟನೆ
Friday, June 18, 2021
ಜಜ್ಜರ್(ಹರಿಯಾಣ): ಹರಿಯಾಣದ ಜಜ್ಜರ್ ಜಿಲ್ಲೆಯಲ್ಲಿ ಮಗುವೊಂದು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಣೆ ಮಾಡಿದ ಬಳಿಕ ಕೂಡ ಅದು ಜೀವಂತವಾಗಿ ಬದುಕಿ ಬಂದಿರುವ ಘಟನೆ ನಡೆದಿದೆ.
ಕುನಾಲ್ ಶರ್ಮಾ ಟೈಫಾಯಿಡ್ನಿಂದಾಗಿ ಸಾವನ್ನಪ್ಪಿದ್ದಾನೆ ಎಂದು ದೆಹಲಿ ವೈದ್ಯರು ಘೋಷಣೆ ಮಾಡಿದ್ದರು. ಇದರಿಂದ ನಿರಾಸೆಗೊಂಡ ಪೋಷಕರು ಮಗುವಿನ ಮೃತದೇಹ ತೆಗೆದುಕೊಂಡು ಮನೆಗೆ ತಲುಪಿದ್ದರು. ಈ ವೇಳೆ ಕುನಾಲ್ ತಾಯಿ ಅಳ್ಳುತ್ತಾ ಆತನ ದೇಹದ ಮೇಲೆ ಮೇಲಿಂದ ಮೇಲೆ ಬಿದ್ದು ಆಕ್ರಂದನ ಹೊರಹಾಕಲು ಶುರು ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಆತನ ದೇಹದಲ್ಲಿ ದಿಢೀರ್ ಚಲನೆ ಕಂಡು ಬಂದಿದೆ.
ತಕ್ಷಣವೇ ಮಗುವನ್ನ ರೋಹತಕ್ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆಗೆ ಮಗು ನಿಧಾನವಾಗಿ ಸ್ಪಂದಿಸಿದ್ದು, ಸಂಪೂರ್ಣವಾಗಿ ಚೇತರಿಸಿಕೊಂಡಿದೆ.