Header Ad

ಹಾಲು ತರಲು ಹೋದ 16 ವರ್ಷದ ಬಾಲಕಿ ನಾಪತ್ತೆ


(ಗಲ್ಫ್ ಕನ್ನಡಿಗ)ಮಂಗಳೂರು; ಹಾಲು ತರಲೆಂದು ಮನೆಯಿಂದ ತೆರಳಿದ ಬಾಲಕಿಯೊಬ್ಬಳು ನಾಪತ್ತೆಯಾದ ಘಟನೆ ನಡೆದಿದೆ.

(ಗಲ್ಫ್ ಕನ್ನಡಿಗ)ಕಡಬ ತಾಲೂಕಿನ ಬಿಳಿನೆಲೆಯ 16 ವರ್ಷ ಪ್ರಾಯದ ಶುಭಲತಾ ನಾಪತ್ತೆಯಾದ ಬಾಲಕಿ. ಈಕೆ
 ಹಾಲು ತರಲೆಂದು ಪೇಟೆಗೆ ಹೋಗಿದ್ದಳು. ಆದರೆ ಪೇಟೆಗೆ ಹೋದ ಬಾಲಕಿಯು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. 


(ಗಲ್ಫ್ ಕನ್ನಡಿಗ)ಶುಭಲತಾ ಬಿಳಿನೆಲೆ ಗ್ರಾಮದ ಮದ ಪರ್ಲ ನಿವಾಸಿ ಬೋಜಪ್ಪ ಗೌಡ ರವರ ಪುತ್ರಿ .  ಬಾಲಕಿ ಎಂದಿನಂತೆ ಬಿಳಿನೆಲೆ ಪೇಟೆಗೆ ಹಾಲು ತರಲು ಹೋಗಿದ್ದು ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

(ಗಲ್ಫ್ ಕನ್ನಡಿಗ)ಈ ಬಗ್ಗೆ
ಬಾಲಕಿಯ ತಂದೆ ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.

(ಗಲ್ಫ್ ಕನ್ನಡಿಗ)
ಇತ್ತೀಚಿನ ಸುದ್ದಿಗಳು