
ಮೂಡುಬೆಳ್ಳೆಯಲ್ಲಿ ಭೀಕರ ಅಪಘಾತ: ಕುಂಟಾಡಿ ರಕೇಶ್ವರಿ ಭಜನಾ ಮಂಡಳಿಯ ಹರೀಶ್ ನಾಯ್ಕ ಸ್ಥಳದಲ್ಲೇ ಸಾವು
Thursday, February 9, 2023
ಉಡುಪಿ: ಉಡುಪಿ ತಾಲೂಕಿನ ಮೂಡುಬೆಳ್ಳೆಯಲ್ಲಿ ಇಂದು ಬೆಳಗ್ಗೆ ಮಹೀಂದ್ರ ಪಿಕಾಪ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರ್ಕಳದ ಕಲ್ಯಾ ಕುಂಟಾಡಿ ರಕ್ತಶ್ವರಿ ಭಜನಾ ಮಂಡಳಿಯ ಹರೀಶ್ ನಾಯ್ಕ ಅವರು ಗಾಯಗೊಂಡಿದ್ದಾರೆ.
ಉಡುಪಿಯಿಂದ ಎಂದಿನಂತೆ ತನ್ನ ಕೆಲಸ ಮುಗಿಸಿಕೊಂಡು ಕುಂಟಾಡಿಯ ಕಲ್ಕಾರುವಿನ ತನ್ನ ಮನೆಗೆ ಬರುತ್ತಿದ್ದ ಹರೀಶ್ ನಾಯ್ಕ ಅವರ ಬೈಕ್ ಗೆ ಮೂಡುಬೆಳ್ಳೆಯ ತಿರುವಿಗೆ ಬೆಳಿಗ್ಗೆ 6.50ರ ವೇಳೆಗೆ ಎದುರಿನಿಂದ ಯಮಸ್ವರೂಪಿಯಾಗಿ ರಾಂಗ್ ಸೈಡ್ ನಿಂದ ಪಿಕಪ್ ಡಿಕ್ಕಿಯಾಗಿದೆ .ಪಿಕಪ್ ಡಿಕ್ಕಿಯಾದ ರಭಸಕ್ಕೆ ಹರೀಶ್ ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹರೀಶ್ ನಾಯಕ್ ಅವರು ಕುಂಟಾಡಿಯ ರಸ್ತೇಶ್ವರಿ ಭಜನಾ ಮಂಡಳಿಯ ಸಕ್ರಿಯ ಸದಸ್ಯರ ದೇವತಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು.ಕಳೆದ 2017 ರಲ್ಲಿ ಹರೀಶ್ ನಾಯಕ್ ಅವರ ಪತ್ನಿ, 8 ತಿಂಗಳ ಮಗು, ತಂದೆ ತಾಯಿ ಸೇರಿದಂತೆ ಅಪಾರ ಬಂಧುಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.