
ಬೈಂದೂರು: 'ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ' ಐವರು ಯುವಕರು ಪೊಲೀಸ್ ವಶಕ್ಕೆ
ಬೈಂದೂರು : ತಾಲೂಕಿನ ಹೇರೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ಮಾಡುತ್ತಿದ್ದ 5 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜೇಶ (25), ಅಭಿಷೇಕ (20), ಚೇತನ (19), ಸುನೀಲ್ (20) ಮತ್ತು ಲಕ್ಷ್ಮೀ ಕಾಂತ (25) ಪೊಲೀಸರು ವಶಕ್ಕೆ ಪಡೆದ ಯುವಕರು.ಇವರೆಲ್ಲ ಸ್ಥಳೀಯರಾಗಿದ್ದಾರೆ.
ಬೈಂದೂರಿನ ಹೇರೂರು ಗ್ರಾಮದ ಯರುಕೋಣೆ ಸೋಲಾರ್ ಸರ್ಕಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಆಗುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ನೋಡಿದಾಗ ಕೆಲವು ಯುವಕರು ಸೇರಿಕೊಂಡು ಒಬ್ಬರಿಗೊಬ್ಬರು ಕೈಗಳಿಂದ ದೂಡಿಕೊಂಡು ಗಲಾಟೆ ಮಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಪೊಲೀಸರು 5 ಮಂದಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.