-->

UDUPI : ತೆರಿಗೆ ಕಟ್ಟೋದು ಯಾರ ಹೊಟ್ಟೆಗೆ ಮಣ್ಣು ಹಾಕಲು ರಘುಪತಿ ಭಟ್ರೆ? ; ಶಾಸಕರನ್ನು ತರಾಟೆಗೆ ತೆಗೆದುಕೊಂಡ ಯುವತಿ

UDUPI : ತೆರಿಗೆ ಕಟ್ಟೋದು ಯಾರ ಹೊಟ್ಟೆಗೆ ಮಣ್ಣು ಹಾಕಲು ರಘುಪತಿ ಭಟ್ರೆ? ; ಶಾಸಕರನ್ನು ತರಾಟೆಗೆ ತೆಗೆದುಕೊಂಡ ಯುವತಿ

ಉಡುಪಿಯ ಪೆರಂಪಳ್ಳಿ-ಮಣಿಪಾಲದ ರಸ್ತೆಗಳ ಅವ್ಯವಸ್ಥೆ ಬಗ್ಗೆ ಸ್ಥಳೀಯ ಯುವತಿಯೊಬ್ಬರು ವೀಡಿಯೋ ಮಾಡಿ ಉಡುಪಿ ಶಾಸಕ ರಘುಪತಿ ಭಟ್ ಅವರನ್ನು ತರಾಟೆಗೆ ತೆಗೆಕೊಂಡಿರುವ ವೀಡಿಯೋಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 “ನಾವು ಇಷ್ಟು ವರ್ಷಗಳಿಂದ ಟೋಲ್ ಕಟ್ಟುತ್ತಿದ್ದೇವೆ, ರಸ್ತೆ ತೆರಿಗೆ, ವಾಹನ ತೆರಿಗೆ ಗಳನ್ನು ಕಟ್ಟುತ್ತಿದ್ದೇವೆ ಇದು ಯಾರ ಹೊಟ್ಟೆಗೆ ಮಣ್ಣು ಹಾಕಲು. ನಾವು ಕೇಳಿದರೆ ನಾವು ರಸ್ತೆ ಮಾಡಿದ್ದೇವೆ, ಚರಂಡಿ ಮಾಡಿದ್ದೇವೆ, ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಅಂತಾರೆ. ನೀವು ಯಾವುದಾದರೂ ಕೆಲಸ ಸರಿಯಾಗಿ ಮಾಡಿದ್ದೀರಾ. ನೀವು ನಿಮ್ಮ ಮನೆಗೆ ಹೋಗುವಾಗ ಪೆರಂಪಳ್ಳಿಯ ಇದೇ ಮಾರ್ಗವಾಗಿ ಹೋಗುತ್ತೀರಲ್ಲಾ ನಿಮಗೆ ಸ್ವಲ್ಪವಾದರೂ ಬೇಜರಾಗುತ್ತಿದೆಯೇ” ಎಂದು ಪ್ರಶ್ನಿಸಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 


ನಾನು  ಕೆಲಸ ಬಿಟ್ಟು ಮನೆಗೆ ಬರುವಾಗ ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಯಿಂದಾಗಿ ಬೈಕ್ ಸವಾರ ವ್ಯಕ್ತಿಯೊಬ್ಬರು ರಸ್ತೆಯ ಹೊಂಡಕ್ಕೆ ಬಿದ್ದುಕೊಂಡಿದ್ದರು. ಇಂತಹ ಎಷ್ಟೊಂದು ಅಪಘಾತಗಳು ಆಗಿರಬಹುದು. ಒಂದು ವೇಳೆ ಅವರಿಗೆ ಏನಾದರೂ ಆಗಿದ್ದರೆ. ಅಥವಾ ಅವರೊಂದಿಗೆ ಮಗುವೇನಾದರೂ ಇರುತ್ತಿದ್ದರೆ ಏನಾಗುತ್ತಿತ್ತು. ನೀವು ಸರಕಾರಿ ವಾಹನದಲ್ಲಿ ಹೋಗುತ್ತೀರ ನಿಮಗೆ ರಸ್ತೆಯಲ್ಲಿ ಹೊಂಡಗಳು ಇದೆಯಾ..? ಇಲ್ಲವಾ..?, ಹೊಂಡಕ್ಕೆ ಬಿದ್ದರೆ ಏನಾಗುತ್ತದೆ ಎಂಬುದರ ಪರಿವೇ ಇರುವುದಿಲ್ಲ. ನಾವು ಕಷ್ಟಪಟ್ಟು ಕಾರು, ಬೈಕು ತೆಗೆದುಕೊಳ್ಳುತ್ತೇವೆ. 

ನಮ್ಮ ವಾಹನ ಇಂತಹ ರಸ್ತೆಯಿಂದ ಅಪಘಾತಗಳು ಆದಾಗ ಹೇಗೆ ಆಗುತ್ತದೆ. ನಮ್ಮ ಕಣ್ಣ ಮುಂದೆ ಅಪಘಾತಗಳು ಆದಾಗ ಹೇಗೆ ಆಗುತ್ತದೆ. ನಮಗೇ ಏನಾದರೂ ಆದರೆ ನಾವು ಯಾರ ಬಳಿ ಹೋಗುವುದು. ಆಸ್ಪತ್ರೆ ಹಣ, ವಾಹನ ಹಣ ನೀವು ಕೊಡುತ್ತೀರಾ ಎಂದು ಶಾಸಕರನ್ನು ಪ್ರಶ್ನಿಸಿದ್ದಾರೆ.




Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99