-->

UDUPI : ರಿಕ್ಷಾದಲ್ಲಿ ಸಿಕ್ಕಿದ ಚಿನ್ನದ ಸರವನ್ನು ಮರಳಿಸಿದ ಪ್ರಾಮಾಣಿಕ ಚಾಲಕ

UDUPI : ರಿಕ್ಷಾದಲ್ಲಿ ಸಿಕ್ಕಿದ ಚಿನ್ನದ ಸರವನ್ನು ಮರಳಿಸಿದ ಪ್ರಾಮಾಣಿಕ ಚಾಲಕ

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಯಡ್ತರೆ ಬೈ ಪಾಸ್ ನಲ್ಲಿ  ರಿಕ್ಷಾ ಚಾಲಕ ಅನಿಲ್ ಫೆರ್ನಾಂಡೀಸ್ ಎನ್ನುವವರು ತಮ್ಮ ರಿಕ್ಷಾದಲ್ಲಿ ಮಹಿಳೆಯೊಬ್ವರು ಬಿಟ್ಟು ಹೋಗಿದ್ದ ಲಕ್ಷಾಂತರ ರೂ‌ ಮೌಲ್ಯದ ಕರಿಮಣಿ ಸರವನ್ನು ಆ ಮಹಿಳೆಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಬೆಳಗ್ಗಿನ ಜಾವ ಬೆಂಗಳೂರಿನಿಂದ ಬಂದಿದ್ದ ಯಶೋಧ ಆಟೋದಲ್ಲಿ ಮನೆಗೆ ಹೋಗುವಾಗ ಕರಿಮಣಿ ಸರ ಬಿದ್ದಿತ್ತು. ಚಾಲಕ ಅನಿಲ್ ಮಹಿಳೆಯನ್ನು ಮನೆಗೆ  ಬಿಟ್ಟು ನಂತರ ವಾಪಾಸು ಯಡ್ತರೆ ಸ್ಟಾಂಡಿಗೆ ಬಂದು ರಿಕ್ಷಾ ನಿಲ್ಲಿಸಿ ಸ್ವಚ್ಛ ಗೊಳಿಸುವಾಗ ಒಂದು ಚಿನ್ನದ ಕರಿಮಣಿ ಕಾಣ ಸಿಕ್ಕಿತ್ತು. ಕೂಡಲೇ ಆ ಚಿನ್ನದ ಕರಿಮಣಿ ಸರವನ್ನು ಬೈಂದೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ನಂತರ ಯಶೋಧಾಗೆ ವಿಷಯ ತಿಳಿದು ಬೈಂದೂರು ಠಾಣಾಧಿಕಾರಿಯವರನ್ನು ಸಂಪರ್ಕಿಸಿದ್ದಾರೆ. ಬಳಿಕ ಚಾಲಕನ ಸಮಕ್ಷಮ 1.50 ಲಕ್ಷ‌ ಮೌಲ್ಯದ 32 ಗ್ರಾಂ ಚಿನ್ನದ ಕರಿಮಣಿ ಸರವನ್ನು ಯಶೋಧಾ ಅವರಿಗೆ ಹಸ್ತಾಂತರಿಸಲಾಯಿತು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99