
ಬಹಿರ್ದೆಸೆಗೆ ತೆರಳಿದ್ದ ಬಾಲಕಿಯ ಕತ್ತು ಸೀಳಿ ರುಂಡದೊಂದಿಗೆ ಊರು ಸುತ್ತಿದ
Saturday, March 26, 2022
ಭುವನೇಶ್ವರ: ಬಹಿರ್ದೆಸೆಗೆ ಹೋಗಿದ್ದ 8 ವರ್ಷದ ಬಾಲಕಿಯ ತಲೆ ಕತ್ತರಿಸಿದ ಮಾದಕ ವ್ಯಸನಿಯೋರ್ವ ರುಂಡ ಹಿಡಿದು ಮನೆಗೇ ಬಂದ ಘಟನೆ ನಡೆದಿದೆ.
ಬಹಿರ್ದೆಸೆಗೆ ಹೋಗಿದ್ದ ಬಾಲಕಿಯನ್ನು ನೋಡಿದ ಆರೋಪಿ ಕೊಡಲಿಯಿಂದ ಆಕೆಯ ರುಂಡ ಬೇರ್ಪಡಿಸಿದ್ದ. ಬಳಿಕ ರುಂಡ ಹಿಡಿದುಕೊಂಡು ತನ್ನ ಮನೆಗೆ ಬಂದಿದ್ದು, ಆತಂಕಗೊಂಡ ಪತ್ನಿ ವಿಚಾರಿಸಿದಾಗ ಆಕೆಯನ್ನೂ ಬೆದರಿಸಿದ್ದ.
ಈ ಆರೋಪಿ ಮಾದಕ ವಸ್ತು ವ್ಯಸನಿಯಾಗಿದ್ದು, ಕೊಲೆಯಾದ ಬಾಲಕಿ ಕುಟುಂಬದವರ ಜೊತೆ ವೈಮನಸ್ಯವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.