![ಲವ್ ಪ್ರಪೋಸ್ ನಿರಾಕರಣೆ: ಯುವತಿಯನ್ನು ಕೊಂದ ಪಾಗಲ್ ಪ್ರೇಮಿ!! ಲವ್ ಪ್ರಪೋಸ್ ನಿರಾಕರಣೆ: ಯುವತಿಯನ್ನು ಕೊಂದ ಪಾಗಲ್ ಪ್ರೇಮಿ!!](https://lh3.googleusercontent.com/-ESpoLFcWETY/YMsun-xnqVI/AAAAAAAAr1w/X6liEQTcgjYQkjyMs7jNarf0adasT4EuwCLcBGAsYHQ/s1600/1623928471865005-0.png)
ಲವ್ ಪ್ರಪೋಸ್ ನಿರಾಕರಣೆ: ಯುವತಿಯನ್ನು ಕೊಂದ ಪಾಗಲ್ ಪ್ರೇಮಿ!!
Thursday, June 17, 2021
ಮಲಪ್ಪುರಂ (ಕೇರಳ) : ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವಕನೋರ್ವ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.
ಮಲಪ್ಪುರಂ ಎಲನಾಡ್ನ ನಿವಾಸಿ ದೃಶ್ಯಾ(21) ಎಂದು ಗುರುತಿಸಲಾಗಿದೆ.ಆರೋಪಿ ವಿನೇಶ್ ವಿನೋದ್ನನ್ನು (21) ವಶಕ್ಕೆ ಪಡೆದುಕೊಂಡಿದ್ದಾರೆ. ವಿನೇಶ್ ಯುವತಿಯ ಮನೆಯೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಚಾಕುವಿನಿಂದ ಇರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹಲ್ಲೆ ತಡೆಯಲು ಮುಂದಾದ ದೃಶ್ಯಾಳ ಸಹೋದರಿ ಸಹ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ 8:30ರ ವೇಳೆಗೆ ಈ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.