![ಜನತಾ ಕರ್ಫ್ಯೂ ವಿಫಲ- ರಾಜ್ಯದಲ್ಲಿ ಶೀಘ್ರದಲ್ಲೇ ಸಂಪೂರ್ಣ ಲಾಕ್ಡೌನ್?? ಜನತಾ ಕರ್ಫ್ಯೂ ವಿಫಲ- ರಾಜ್ಯದಲ್ಲಿ ಶೀಘ್ರದಲ್ಲೇ ಸಂಪೂರ್ಣ ಲಾಕ್ಡೌನ್??](https://lh3.googleusercontent.com/-EficP6963aE/YJTKHGZG5SI/AAAAAAAAHoE/m-8RwV9zXCogZiS9lfJudRXKX12w-u7ugCNcBGAsYHQ/s1600/1620363800380170-0.png)
ಜನತಾ ಕರ್ಫ್ಯೂ ವಿಫಲ- ರಾಜ್ಯದಲ್ಲಿ ಶೀಘ್ರದಲ್ಲೇ ಸಂಪೂರ್ಣ ಲಾಕ್ಡೌನ್??
Friday, May 7, 2021
ಬೆಂಗಳೂರು: ಕೋರೋನಾ ಪಾಸಿಟಿವ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿದ್ದು, ರಾಜ್ಯಾದ್ಯಂತ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ರಾಜ್ಯಾದ್ಯಂತ ಎರಡು ವಾರಗಳ ಜನತಾ ಕರ್ಫ್ಯೂ ಘೋಷಿಸಲಾಯಿತದರೂ ಇದು ಕೊರೋನಾ ಪ್ರಕರಣಗಳು ಕಡಿಮೆಯಾಗಲು ಯಾವುದೇ ಪರಿಣಾಮ ಬೀರಿಲ್ಲ.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಇಂದು ಕೊರೋನಾ ಉಸ್ತುವಾರಿ ಹೊತ್ತಿರುವ ಸಚಿವರ ಜೊತೆ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ಸಂಪೂರ್ಣ ಲಾಕ್ಡೌನ್ ಕುರಿತಂತೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಲಾಕ್ಡೌನ್ ನ ರೂಪುರೇಷೆಗಳನ್ನು ಬಗ್ಗೆಯೂ ಇಲ್ಲಿ ಚರ್ಚಿಸಬಹುದು.
ಈ ನಿಟ್ಟಿನಲ್ಲಿ 2 ತಿಂಗಳಿಗೆ ಬೇಕಾಗುವ ಪಡಿತರ ಸಾಮಾಗ್ರಿಗಳನ್ನು ಮುಂಚಿತವಾಗಿಯೇ ನೀಡುವ ಕುರಿತಂತೆ ಚರ್ಚೆಗಳಾಗಿವೆ.
ಕೇರಳ ಮತ್ತು ರಾಜಸ್ಥಾನ ರಾಜ್ಯಗಳು ಈಗಾಗಲೇ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದು, ರಾಜ್ಯದಲ್ಲೂ ಇದೇ ಮಾದರಿ ಅನುಕರಿಸಲು ತಯಾರಿ ನಡೆದಿದೆ.