![ಸೌತಡ್ಕದಲ್ಲಿ ದರೋಡೆಕೋರರ ದುಷ್ಕೃತ್ಯ:ಮನೆಮಾಲೀಕನನ್ನು ಕಟ್ಟಿ ಹಾಕಿ, ಪತ್ನಿಗೆ ಚೂರಿ ಯಿಂದ ಇರಿದು ದರೋಡೆ ಸೌತಡ್ಕದಲ್ಲಿ ದರೋಡೆಕೋರರ ದುಷ್ಕೃತ್ಯ:ಮನೆಮಾಲೀಕನನ್ನು ಕಟ್ಟಿ ಹಾಕಿ, ಪತ್ನಿಗೆ ಚೂರಿ ಯಿಂದ ಇರಿದು ದರೋಡೆ](https://1.bp.blogspot.com/-H6UDWCs1rKQ/X-ArIirR3sI/AAAAAAAAHPc/LIyKNkvviSgM4RJsuZKj-ZpIA9agnpUgQCNcBGAsYHQ/s16000/southadka%2Brobbery.jpg)
ಸೌತಡ್ಕದಲ್ಲಿ ದರೋಡೆಕೋರರ ದುಷ್ಕೃತ್ಯ:ಮನೆಮಾಲೀಕನನ್ನು ಕಟ್ಟಿ ಹಾಕಿ, ಪತ್ನಿಗೆ ಚೂರಿ ಯಿಂದ ಇರಿದು ದರೋಡೆ
Monday, December 21, 2020
ಮಂಗಳೂರು: ಬೆಳ್ತಂಗಡಿ ತಾಲೂಕಿನ ಕೌಕ್ರಾಡಿ ಗ್ರಾಮದ ಸೌತಡ್ಕದಲ್ಲಿ ಮನೆ ಮಾಲೀಕನನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಘಟನೆ ನಡೆದಿದೆ.
ಸೌತಡ್ಕ ಮಹಾಗಣಪತಿ ದೇವಸ್ಥಾನದ ಸಮೀಪವಿರುವ ವಿ ಎಚ್ ಪಿ ಮುಖಂಡ ತುಕ್ತಪ್ಪ ಶೆಟ್ಟಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಒಂಬತ್ತು ಮಂದಿ ದರೋಡೆಕೋರರು ರಾತ್ರಿ 12 ಗಂಟೆಯಿಂದ 2 ಗಂಟೆಯ ಮಧ್ಯಭಾಗದಲ್ಲಿ ಮನೆಗೆ ನುಗ್ಗಿ ತುಕ್ರಪ್ಪ ಶೆಟ್ಟಿ ಅವರನ್ನು ಕಟ್ಟಿ ಹಾಕಿ ಅವರ ಪತ್ನಿ ಗೀತಾ ಶೆಟ್ಟಿಗೆ ಚೂರಿಯಿಂದ ದಾಳಿ ಮಾಡಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ , ನಗದು ದೋಚಿ ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ.