![ಮೂಡಬಿದ್ರೆಯಲ್ಲಿ ಸಿಡಿಲಿಗೆ ಸಾವನ್ನಪ್ಪಿದ 3 ರಾಷ್ಟ್ರಪಕ್ಷಿ- ಅಂತ್ಯಕ್ರೀಯೆ ನಡೆದದ್ದು ಹೀಗೆ...(video) ಮೂಡಬಿದ್ರೆಯಲ್ಲಿ ಸಿಡಿಲಿಗೆ ಸಾವನ್ನಪ್ಪಿದ 3 ರಾಷ್ಟ್ರಪಕ್ಷಿ- ಅಂತ್ಯಕ್ರೀಯೆ ನಡೆದದ್ದು ಹೀಗೆ...(video)](https://lh3.googleusercontent.com/-9xshM6o_Z7o/X1ZQbABHFLI/AAAAAAAAGOQ/nBzvYWX5mSosGcGPEQ_8W-a5PW3LVKGkQCNcBGAsYHQ/s1600/1599492199431721-0.png)
ಮೂಡಬಿದ್ರೆಯಲ್ಲಿ ಸಿಡಿಲಿಗೆ ಸಾವನ್ನಪ್ಪಿದ 3 ರಾಷ್ಟ್ರಪಕ್ಷಿ- ಅಂತ್ಯಕ್ರೀಯೆ ನಡೆದದ್ದು ಹೀಗೆ...(video)
(ಗಲ್ಪ್ ಕನ್ನಡಿಗ)ಮೂಡಬಿದ್ರೆ: ಸಿಡಿಲಿನ ಹೊಡೆತಕ್ಕೆ ಸಾವನ್ನಪ್ಪಿದ ಮೂರು ನವಿಲುಗಳನ್ನು ಸರಕಾರಿ ನಿಯಾಮವಳಿಯಂತೆ ಗೌರವಪೂರ್ವಕ ಅಂತ್ಯಕ್ರೀಯೆ ನಡೆಸಲಾಯಿತು.
ಗಲ್ಫ್ ಕನ್ಮಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಮೂಡುಕೋಣಾಜೆಯ ಏರೋಡಿಬೆಟ್ಟದ ಏನ್ಮಜೆಯಲ್ಲಿ ನಿನ್ನೆ ಮಾವಿನ ಮರಕ್ಕೆ ಡಿಸಿಲು ಬಡಿದು ಮಾವಿನ ಮರದಲ್ಲಿ ಕೂತಿದ್ದ ನವಿಲುಗಳು ಸಾವನ್ನಪ್ಪಿದ್ದವು. ವಿಷಯ ತಿಳಿದು ಇಂದು ಸ್ಥಳಕ್ಕಾಗಮಿಸಿದ ಮೂಡಬಿದ್ರೆ ಅರಣ್ಯಾಧಿಕಾರಿಗಳು ಸಾವನ್ನಪ್ಪಿದ ಮೂರು ನವಿಲುಗಳಿಗೆ ಸರಕಾರಿ ಗೌರವದೊಂದಿಗೆ ಅಂತ್ಯಕ್ರೀಯೆ ನಡೆಸಿದರು.
(ಗಲ್ಪ್ ಕನ್ನಡಿಗ)ರಾಷ್ಟ್ರಪಕ್ಷಿಗಳ ಸಾವಿನ ವೇಳೆ ಸರಕಾರದ ನಿಯಾಮವಳಿಯಂತೆ ಅಂತ್ಯಕ್ರೀಯೆ ನಡೆಸಬೇಕಾಗಿದೆ. ಅದರಂತೆ ಘಟನೆ ನಡೆದ ಸ್ಥಳದಲ್ಲಿ ಮಹಜರು ಮಾಡಿದ ಅರಣ್ಯಾಧಿಕಾರಿಗಳು ಬಳಿಕ ಪಶುವೈದ್ಯರಿಂದ ಪೋಸ್ಟ್ ಮಾರ್ಟಂ ನಡೆಸಿ ಅಂತ್ಯಕ್ರೀಯೆ ನಡೆಸಿದ್ದಾರೆ.
(ಗಲ್ಪ್ ಕನ್ನಡಿಗ)