
UDUPI :ಆಹಾರ ನೀಡುವ ನಾಟಕವಾಡಿ, ಗೋ ಕಳ್ಳತನ - ದುಷ್ಕೃತ್ಯ Video CCTV ಯಲ್ಲಿ ಸೆರೆ
Monday, April 4, 2022
ಉಡುಪಿಯ ಜಿಲ್ಲೆಯ ಕಾರ್ಕಳದಲ್ಲಿ ಗೋ ಕಳ್ಳತನ ಮತ್ತೆ ಮುಂದುವರಿದಿದೆ. ಕಾರ್ಕಳ ಬಂಗ್ಲೆಗುಡ್ಡೆ ಯ ವಿದ್ಯಾ ಸರಸ್ವತಿ ಮಂದಿರದ ಆವರಣದಲ್ಲಿದ್ದ ದನಗಳನ್ನು ಕಾರ್ನಲ್ಲಿ ತುಂಬಿಕೊಂಡು ಹೋಗಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿದೆ..
ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರು ವಿದ್ಯಾ ಸರಸ್ವತಿ ಮಂದಿರದ ಆವರಣದಲ್ಲಿದ್ದ ದನಕ್ಕೆ ಆಹಾರ ನೀಡಿ ನಾಟಕವಾಡುತ್ತಾರೆ.. ಬಳಿಕ ಉಪಾಯವಾಗಿ ದನದ ತಲೆ ಸವರಿ ಗಟ್ಟಿಯಾಗಿ ಕುತ್ತಿಗೆ ಹಿಡಿದು ಕಾರಿಗೆ ತುಂಬಿಸಿ ಪರಾರಿಯಾಗುತ್ತಾರೆ.
ಮೂವರು ಕಳ್ಳರ ಕರಾಮತ್ತು ಪಕ್ಕದ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪದೇ ಪದೇ ಕಾರ್ಕಳ ಭಾಗದಲ್ಲಿ ಗೋ ಕಳ್ಳತನವಾದರೂ ಪೊಲೀಸರು ಹೆಚ್ಚಿನ ಕ್ರಮ ಕೈಗೊಳ್ಳುತ್ತಿಲ್ಲ ಅಂತ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ..