ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಉದ್ಯೋಗಕ್ಕಾಗಿ ಬಂದವರು ಒಂಟೆಕಾವಲಿಗೆ: ಭಾರತೀಯದ ಅಳಲು

ದೋಹಾ, ಡಿಸೆಂಬರ್ ೧೪: ಉತ್ತಮ ಉದ್ಯೋಗದ ಆಮಿಷ ತೋರಿಸಿ ಕತರ್ ಗೆ ಬಂದ ಭಾರತೀಯರಿಬ್ಬರನ್ನು ಅವರಿಗೆ ಮಾತುಕೊಟ್ಟಿದ್ದ ಕೆಲಸವನ್ನು ನೀಡದೇ ಒಂಟೆಕಾವಲು ಕಾಯಲು ಮರುಭೂಮಿಗೆ ರವಾನಿಸಿದ ಘಟನೆ ವರದಿಯಾಗಿದೆ. ಕೇರಳದ ವಡಕ್ಕಾಂಜೇರಿ ಸಮೀಪದ ಗ್ರಾಮವೊಂದರ ನಿವಾಸಿಗಳಾಗಿರುವ ಸುಲೇಮಾನ್ ಮತ್ತು ಜಾಫರ್ ಎಂಬ ಇಬ್ಬರು ಭಾರತೀಯರನ್ನು ಕೇರಳದ ಏಜೆಂಟರೊಬ್ಬರು ಒಳ್ಳೆಯ ಕೆಲಸದ ಆಮಿಷ ತೋರಿಸಿ ಪ್ರತಿ ವ್ಯಕ್ತಿಗೆ ೬೦,೦೦೦ ರೂಪಾಯಿಗಳನ್ನು ಪಡೆದುಕೊಂಡು ಕತರಿಗೆ ಕಳಿಸಿದ್ದರು. ಆದರೆ ಕತರ್ ತಲುಪಿದ ಇಬ್ಬರಿಗೂ ಅವರನ್ನು ಕೆಲಸಕ್ಕೆ ತೆಗೆದುಕೊಂಡವರು ವೀಸಾ ಸ್ಟಾಂಪ್ ಲಗತ್ತಿಸಾ ಬಳಿಕ ಕತಾರ್ ಸೌದಿ ಗಡಿಯಲ್ಲಿರುವ, ಸೌದಿ ಅರೇಬಿಯಾಕ್ಕೆ ಸೇರಿದ ಅಲ್ ಹಸಾದಿಂದ ೮೦ ಕಿ.ಮಿ. ದೂರವಿರುವ ಅಲ್ ಸಾದಿಯಾ ಎಂಬಲ್ಲಿ ಬರೆಯ ಒಂದು ಟೆಂಟ್ ಮಾತ್ರವಿರುವ ಸ್ಥಳದಲ್ಲಿ ಕನಿಷ್ಟ ಸೌಲಭ್ಯಗಳನ್ನು ಮಾತ್ರ ಒದಗಿಸಿ ಒಂಟೆಗಳನ್ನು ಕಾವಲು ಕಾಯಲು ಕಳಿಸಲಾಗಿದೆ. ಯಾವಾಗಲೋ ಒಮ್ಮೆ ಅಗತ್ಯವಸ್ತುಗಳನ್ನು ನೀಡುವ ಇವರ ಮಾಲಿಕರ ಬಳಿ ಸಂಬಳ ಕೇಳಿದರೆ ಹಲ್ಲೆ ನಡೆಸುತ್ತಾರೆಂದು ಅವರು ದೂರಿದ್ದಾರೆ.

ಏಳುನೂರು ರಿಯಾಲ್ ಸಂಬಳ ನಿಗದಿಗೊಳಿಸಿ ಬಂದ ಇವರಿಗೆ ಕಳೆದ ಎರೆಡು ತಿಂಗಳಿಂದ ಒಂದು ತಿಂಗಳ ಸಂಬಳ ಮಾತ್ರ ಸಿಕ್ಕಿದೆ. ನಗರದ ಯಾವುದೇ ಸಂಪರ್ಕವಿಲ್ಲದ ಇವರಿಗೆ ಮರುಭೂಮಿಯ ಮಧ್ಯದ ಒಂಟಿಜೀವನ ಅಸಾಧ್ಯವಾಗಿದೆ. ಆಕಸ್ಮಿಕವಾಗಿ ಇವರಲ್ಲೊಬ್ಬರು ಕತರ್ ನಲ್ಲಿರುವ ಸಮಾಜ ಸೇವಕರ ಮೊಬೈಲಿಗೆ ಮಿಸ್ ಕಾಲ್ ಕೊಡಲು ಸಾಧ್ಯವಾಗಿತ್ತು. ಬಳಿಕ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ ಸಮಾಜ ಸೇವಕರು ಇವರ ಅಳಲನ್ನು ಆಲಿಸಿ ಭಾರತೀಯ ದೂತಾವಾಸಕ್ಕೆ ಇವರ ಬಗ್ಗೆ ದೂರು ನೀಡಿದ್ದಾರೆ.

ಇಂತರ ಹಲವಾರು ಪ್ರಕರಣಗಳು ದಾಖಲಾಗಿದ್ದು, ಇಂತಹ ಒಂದು ಸ್ಥಳದಿಂದ ಭಾರತೀಯರಾದ ಬಾಲನ್ ಎಂಬುವರು ಪರಾರಿಯಾಗಿದ್ದಾರೆ. ಮರುಭೂಮಿಯ ನಡುವೆ ಇರುವ ಸಾದಿಯಾದಿಂದ ಬಾಲನ್ ಜೀವಸಹಿತ ಹೊರಬಿದ್ದಿರುವ ಯಾವ ಪುರಾವೆ ಇನ್ನೂ ಸಿಕ್ಕಿಲ್ಲ.  ಬಾಲನ್ ಕಣ್ಮರೆ ಪ್ರಕರಣ ಸಹಿತ ಇತರ ಪ್ರಕರಣಗಳ ಬಗ್ಗೆ ಭಾರತೀಯ ದೂತಾವಾಸದಲ್ಲಿ ಮಾತುಕತೆಗಳು ನಡೆಯುತ್ತಿವೆ. ಉಳಿದ ವಿವರಗಳು ಸಧ್ಯದಲ್ಲಿಯೇ ಸಿಗಬಹುದೆಂದು ನಿರೀಕ್ಷಿಸಲಾಗಿದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ದಿ ಪೆನಿನ್ಸುಲಾ
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-14


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಏಷ್ಯನ್ ಒಳಾಂಗಣ ಕ್ರೀಡಾಕೂಟಕ್ಕೆ ೩೨ ಸದಸ್ಯರ ದಂಡು; ಭಾರತ ತಂಡಕ್ಕೆ ಅಂಜು ಬಾಬಿ ಜಾರ್ಜ್ ನೇತೃತ್ವ
»ಗಿನ್ನೆಸ್ ದಾಖಲೆ ಸೇರಿದ ಕತರ್ ಕೆ.ಎಫ್.ಸಿ.
»ತುಂಡಾದ ಕೇಬಲ್ : ಅಸ್ತವ್ಯಸ್ತವಾದ ಕತರ್ ಟೆಲಿಫೋನ್ ವ್ಯವಸ್ಥೆ
»ಅನಿವಾಸಿಗಳಿಂದ ಆಚರಿಸಲ್ಪಟ್ಟ ಗಣತಂತ್ರ ದಿವಸ : ಹಬ್ಬದ ವಾತಾವರಣ
»ಇನ್ನಷ್ಟು ದುಬಾರಿಯಾಗಲಿರುವ ಭಾರತದ ಅಕ್ಕಿ.
»ತಿಜೋರಿ ಕದ್ದು ಒಡೆಯಲನುವಾಗುತ್ತಿರುವಾಗಲೇ ಪೋಲೀಸರಿಗೆ ಸಿಕ್ಕಿಬಿದ್ದ ಕಳ್ಳರು
»ಜೆಟ್ ಏರ್ ವೇಸ್ ಪ್ರಾರಂಭಿಸಿರುವ ದೋಹಾ-ಮುಂಬೈ,ಕಲ್ಲಿಕೋಟೆ ನೇರ ವಿಮಾನಯಾನ
»ಉದ್ಯೋಗಕ್ಕಾಗಿ ಬಂದವರು ಒಂಟೆಕಾವಲಿಗೆ: ಭಾರತೀಯದ ಅಳಲು
»ದೋಹ: ಕರ್ನಾಟಕ ಶಾಸ್ತ್ರೀಯ ಸಂಗೀತಪ್ರಿಯರಿಗೆ ಅಪರೂಪದ ಉಪಚಾರ
»ಸಾರಿಗೆ ಕಾನೂನುಗಳ ಅನುವಾದ ಅಗತ್ಯ: ಏಶಿಯಾ ಮೂಲದ ಅನಿವಾಸಿಗಳ ಬೇಡಿಕೆ
»ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಬಂದರೆ ದಂಡ: ಕತರ್ ಸಾರಿಗೆ ಸಚಿವಾಲಯ
»ಏರುತ್ತಿರುವ ಮೊಟ್ಟೆ ಬೆಲೆ, ಆತಂಕದಲ್ಲಿ ಬೇಕರಿಗಳು.
»ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ವಿದೇಶಿಯರ ಸಂಖ್ಯೆ ೭೦ ಮಿಲಿಯನ್!
»ಡಾಲರ್ ಮೇಲಿನ ಅವಲಂಬನೆಯಲ್ಲಿ ಬದಲಾವಣೆ ಇಲ್ಲ, ಜಿಸಿಸಿ.
»ದಾನಿಗಳಿಗೆ ಸನ್ಮಾನ:(THE Indian Community Benevolent Fund (ICBF)
»ಐಸಿಸಿ ಉತ್ಸವದಲ್ಲಿ ಮನಸೆಳೆದ ಮಕ್ಕಳ ನೃತ್ಯ
»ಆಯಾಗಳ ನೇಮಕಕ್ಕೆ ತಾತ್ಕಾಲಿಕ ತಡೆಯಾಜ್ಞೆ ಇನ್ನೂ ಪ್ರಸ್ತುತ
»ಐಡಿಯಲ್ ಇಂಡಿಯನ್ ಸ್ಕೂಲ್ ವಿಧ್ಯಾರ್ಥಿ ಅಕಾಲಿಕ ಮ್ರತ್ಯು
»೧೫ ವರ್ಷ ಒಳಗಿನವರ ಕ್ರಿಕೆಟ್-ನಾಯಕತ್ವ ವಹಿಸಿದ ಮಂಗಳೂರಿನ ಬಾಲಕ
»500ಕ್ಕೂ ಹೆಚ್ಚು ಮಕ್ಕಳ ಉಚಿತ ನೇತ್ರ ತಪಾಸಣೆ
»2016ರ ಒಲಿಂಪಿಕ್ಸ್ ಕ್ರೀಡೆಗಳ ಪ್ರಯೋಜಕತೆಗೆ ಕತಾರ್ ಯತ್ನ
»೨೦ನೆ ಮಾಂಟ್ರಿಯಲ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಕತಾರ್
»ಇಪ್ಪತ್ತು ವರ್ಷ ಪೂರೈಸಿದ ಮೊಬೈಲ್ ಟೆಲಿಕಾಂ ಕಂಪನಿ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri