ಕತರ್: ಪ್ರಯಾಣಿಕರು ಮರೆತ ಹಣವನ್ನು ಹಿಂತಿರುಗಿಸಿ ಮಾನವೀಯತೆ ಮೆರೆದ ಮಂಗಳೂರಿನ ಬಾಲಕೃಷ್ಣ |
ಪ್ರಕಟಿಸಿದ ದಿನಾಂಕ : 2008-06-13
ಪ್ರಯಾಣಿಕರು ಮರೆತ ಹಣದ ಮೊತ್ತ 11,000ರಿಯಾಲ್ ಅಂದರೆ ಹದಿಮೂರು ಲಕ್ಷ ರೂಪಾಯಿಗೂ ಹೆಚ್ಚು
ದೋಹಾ, ಜೂನ್ ೧೩: ಹಣ ಯಾರಿಗೆ ಬೇಡ, ಅದೂ ಸುಲಭವಾಗಿ ಸಿಕ್ಕುತ್ತಿರುವಾಗ? ಮಂಗಳೂರಿನ ಬಾಲಕೃಷ್ಣ ಶೆಟ್ಟಿ ಸಹಾ ಉದ್ಯೋಗನಿಮಿತ್ತ ಕತರಿಗೆ ಬಂದ ಸಾಮಾನ್ಯ ಯುವಕ. ಸಾವಿರದಿನ್ನೂರು ರಿಯಾಲ್ ಅಥವಾ ಹದಿನಾಲ್ಕು ಸಾವಿರ ಭಾರತೀಯ ರೂಪಾಯಿ ಸಂಬಳ. ಏರುತ್ತಿರುವ ಜೀವನವೆಚ್ಚ, ಕಷ್ಟಕರ ಜೀವನ, ಸುಲಭವಾಗಿ ಪ್ರಯಾಣಿಕರೊಬ್ಬರು ಬಿಟ್ಟು ಹೋದ ಹದಿಮೂರು ಲಕ್ಷ ರೂಪಾಯಿ ಉಪಯೋಗಿಸಿ ಕೊಂಡು ಮನೆಯಲ್ಲಿ ಆರಾಮವಾಗಿರಬಹುದಾಗಿತ್ತು. ಆದರೆ ನಮ್ಮ ಮಣ್ಣಿನ ಮಹಿಮೆ, ಬಾಲಕೃಷ್ಣರ ಆತ್ಮಸಾಕ್ಷಿ ಇದಕ್ಕೆ ಒಪ್ಪಲಿಲ್ಲ. ಹಣ ಕಳೆದುಕೊಂಡವರು ಪಡಬಹುದಾದ ಪಾಡು, ಈ ಹಣವನ್ನು ತೆಗೆದುಕೊಂಡರೆ ಭಗವಂತನಿಗೆ ಹೇಳುವ ಮಾತು ಮನಸ್ಸಿಗೆ ಬಂದು ಮಾನವೀಯತೆಗೇ ಹೆಚ್ಚು ಒತ್ತು ನೀಡಿ ಸಿಕ್ಕ ಹಣವನ್ನು ಹಿಂತಿರುಗಿಸುವ ನಿರ್ಧಾರ ತೆಗೆದುಕೊಂಡರು.
ಆ ಬಳಿಕ ಅವರು ಪ್ರಾಮಾಣಿಕವಾಗಿ ಟ್ಯಾಕ್ಸಿ ಕಂಪನಿಯ (ಮೋವಾಸಲಾತ್) ಕಛೇರಿಯಲ್ಲಿ ನೀಡಿ ಹಣ ಕಳೆದುಕೊಂಡವರು ಕರೆ ನೀಡಿದರೆ ಹಿಂತಿರುಗಿಸಲು ಕೇಳಿಕೊಂಡರು. ಆ ಬಳಿಕ ನಿರೀಕ್ಷೆಯಂತೆ ಹಣ ಕಳೆದುಕೊಂಡವರು ಕರೆ ಮಾಡಿದಾಗ ಚೀಲದೊಳಗಿದ್ದ ವಸ್ತು ಹಾಗೂ ಹಣವನ್ನು ಪರಾಮರ್ಶಿಸಿ ನಿಜವಾದ ಮಾಲಿಕರಿಗೆ ಹಣವನ್ನು ಮೊವಾಸಲಾತ್ ಅಧಿಕಾರಿಗಳು ಹಿಂತಿರುಗಿಸಿದ್ದಾರೆ.
ಬಾಲಕೃಷ್ಣರವರ ಪ್ರಾಮಾಣಿಕತೆಯನ್ನು ಇಡಿಯ ಮೊವಾಸಲಾತ್ ತಂಡ ಕೊಂಡಾಡಿದೆ. ಸಂಸ್ಥೆಯ ಅಧಿಕಾರಿಗಳು ಇವರ ಕಾರ್ಯಕ್ಷಮತೆ ಹಾಗೂ ಮಾನವೀಯತೆಯನ್ನು ಪ್ರಶಂಸಿಸಿ ಹಲವು ಬಹುಮಾನಗಳನ್ನು ನೀಡಿ ಗೌರವಿಸಿದ್ದಾರೆ.
ಹಿರಿಯ ಮೊವಾಸಲಾತ್ ಅಧಿಕಾರಿಗಳಾದ ಅಹ್ಮದ್ ಬುಶರ್ಬೆಕ್ ಅಲ್ ಮನ್ಸೂರಿ, ಅಹ್ಮದ್ ಅಲ್ ಅನ್ಸಾರಿ ಹಾಗೂ ಇನ್ನಿತರ ಅಧಿಕಾರಿಗಳು ಬಾಲಕೃಷ್ಣರನ್ನು ತಮ್ಮ ಕಛೇರಿಗೆ ಆಹ್ವಾನಿಸಿ ಬೆನ್ನು ತಟ್ಟಿ ಅಭಿನಂದಿಸಿದ್ದಾರೆ.
ಬಾಲಕೃಷ್ಣರವರ ಪ್ರಾಮಾಣಿಕತೆ ತುಳುನಾಡಿನವರಿಗೆ ಹೆಮ್ಮೆಯ ವಿಷಯವಾಗಿದೆ, ಹಾಗೂ ಈ ಗುಣಗಳಿಂದಾಗಿಯೇ ಗಲ್ಫ್ ರಾಷ್ಟ್ರಗಳಲ್ಲಿ ಮಂಗಳೂರಿನವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ ಎಂದು ತುಳು ಕೂಟ ಕತರ್ ಅಧ್ಯಕ್ಷರಾದ ರವಿಶೆಟ್ಟಿಯವರು ತಿಳಿಸಿದ್ದಾರೆ.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷರಾದ ಜನಾಬ್ ಸೈಯದ್ ಅಬ್ದುಲ್ ಹಾಯ್ ಅವರೂ ಬಾಲಕೃಷ್ಣರವರನ್ನು ಪ್ರಶಂಸಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಇಕ್ಬಾಲ್ ಮನ್ನ, ದೋಹ. ಕನ್ನಡ ಅನುವಾದ: ಅರ್ಶದ್ ದುಬೈ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-13
|
|
| VIJAY BRAHMAVAR, BRAHMAVAR-UDUPI | 2008-07-27 | | CONGRTS! MR. BALAKRISHNA! PROUD OF YOU. WHAT YOU DONE AND SHOWED HOW MANGALOREANS ARE LIVING IN MIDDLE EAST HELPING EACH OTHER
BRINGING COASTAL NAME ON TOP IN WORLD KEEP IT UP - BEST REGARDS, - VIJAY BRAHMAVAR FROM BAHRAIN |
|