ಜರ್ಮನಿಯ ವಿದ್ವಾಂಸರಿಗೆ ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2008-06-11
ಬರ್ಲಿನ್: ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನೆ ಕೇಂದ್ರವು ಶ್ರುತಕೇವಲಿ ಎಜ್ಯುಕೇಷನ್ ಟ್ರಸ್ಟ್ ಸಹಯೋಗದೊಂದಿಗೆ ಕೊಡ ಮಾಡುವ ’ಪ್ರಾಕೃತ ಜ್ಞಾನಭಾರತಿ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭ ಮೇ 25 ರಂದು ಬರ್ಲಿನ್ನಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಜರ್ಮನಿಯ ವಿದ್ವಾಂಸರಾದ ಬ್ಯಾಂಬರ್ಗ್ನ ಪ್ರೊ.ವಿಲ್ಲೆಮ್ ಬೋಲಿ ಮತ್ತು ಬರ್ಲಿನಿನ ಪ್ರೊ. ಕ್ಲಾಸ್ ಬ್ರೂನ್ ಅವರಿಗೆ ಕ್ರಮವಾಗಿ 2005 ಮತ್ತು 2006ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಒಂದು ಲಕ್ಷ ರು. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಈ ಸಮಾರಂಭಕ್ಕೆ ವಿವಿಧ ದೇಶಗಳ, ವಿಶ್ವವಿದ್ಯಾಲಯಗಳ ಗಣ್ಯರು ಆಗಮಿಸಿದ್ದರು.
ಪ್ರೊ. ಕಮಲಾ ಹಂಪನಾ ಮತ್ತು ಪ್ರೊ. ಪ್ರೇಮ್ ಸುಮನ್ ಅವರು ಸಮಾರಂಭವನ್ನು ಆಯೋಜಿಸಿ, ನಿರ್ವಹಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಕೃತ ಅಧ್ಯಯನ, ಸಂಶೋಧನೆ ಮತ್ತು ಪ್ರಸರಣಕ್ಕಾಗಿ ದೀರ್ಘಕಾಲ ನೀಡಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ವರದಿಯ ವಿವರಗಳು |
 |
ಕೃಪೆ : ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-11
|
|
|