ಬಹರೇನ್: ಹಲವು ಭಾರತೀಯರಿಗೆ 80,000 ಬಹರೇನಿ ದಿನಾರ್ ಟೊಪ್ಪಿ ಹಾಕಿದ -ಗುರು- |
ಪ್ರಕಟಿಸಿದ ದಿನಾಂಕ : 2008-06-05
ಹಲವು ಭಾರತೀಯರಿಗೆ ಮೋಸ : ಕೇರಳದಲ್ಲಿ ರೇಪ್, ಮಾದಕ ಪದಾರ್ಥ ಮತ್ತು ಮೋಸದ ಆರೋಪ
ಬಹರೇನ್, ಜೂನ್ 5: ಧರ್ಮಾರ್ಥ ಸಂಸ್ಥೆಗಳಿಗೆ ಹಾಗೂ ಪ್ರವಾಸಿತಾಣದಲ್ಲಿ ವಿನಿಯೋಗಿಸುವ ಆಮಿಶವೊಡ್ಡಿ ಸುಮಾರು ಇಪ್ಪತ್ತು ಭಾರತೀಯರಿಗೆ ಮೋಸವೆಸಗಿದ -ಗುರು- ಪರಾರಿಯಾದ ವರದಿಯಾಗಿದೆ.
ಒಟ್ಟು ಎಂಭತ್ತು ಸಾವಿರ ಬಹರೇನಿ ದಿನಾರ್ ಗಳಷ್ಟು ಭಾರೀ ಮೊತ್ತವನ್ನು ಸಂಗ್ರಹಿಸಿದ ಗುರು-ಸ್ವಾಮಿ ಅಮೃತ ಚೈತನ್ಯ ಕಾಣೆಯಾದ ಬಳಿಕವಷ್ಟೇ ಹಣ ಕಳೆದುಕೊಂಡವರು ಗೋಳು ತೋಡಿಕೊಂಡಿದ್ದಾರೆ.
ಸುಮಾರು ಮೂವತ್ತೈದು ವರ್ಷ ವಯಸ್ಸಿನ ಸ್ವಾಮಿಯ ಮೇಲೆ ಈಗಾಗಲೇ ಕೇರಳದಲ್ಲಿ ಹಲವು ಮಾನಭಂಗ, ಮಾದಕ ಪದಾರ್ಥ ಹೊಂದಿರುವ ಹಾಗೂ ಮೋಸವೆಸಗಿದ ಆರೋಪಗಳಿವೆ.
ಸುಮಾರು 2005 ರಿಂದ ಬಹರೇನಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದ ಸ್ವಾಮಿ ಸುಮಾರು 33 ಜನರಿಂದ ಎಂಭತ್ತು ಸಾವಿರ ದೀನಾರುಗಳಿಗೂ ಅಧಿಕ ಮೊತ್ತವನ್ನು ಸಂಗ್ರಹಿಸಿದ್ದನೆನ್ನಲಾಗಿದೆ.
ಇವರಲ್ಲಿ ಇಪ್ಪತ್ತು ವ್ಯಕ್ತಿಗಳು ಕೇರಳದ ಎರ್ನಾಕುಳಂ ಪೋಲೀಸ್ ಇಲಾಖೆಗೆ ಇ-ಮೇಲ್ ಮುಖಾಂತರ ದೂರು ನೀಡಿದ್ದು ಪ್ರತಿಗಳನ್ನು ಕೇರಳ ಸರ್ಕಾರದ ಗೃಹಮಂತ್ರಿಗಳ ಕಛೇರಿಗೂ ರವಾನಿಸಲಾಗಿದೆ.
ಇನ್ನುಳಿದ ಸಂತ್ರಸ್ತರು ಬಹರೇನ್ ಬಿಟ್ಟು ಸ್ವದೇಶಕ್ಕೆ ಹಿಂತಿರುಗಬೇಕಾಗಿ ಬಂದಿದೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ಡೇಲಿ ನ್ಯೂಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-06-05
|
|
|