ಕುವೈಟ್: ಕುಂದಾಪುರ ವರಾದೋ ವೆಲ್ಫೇರ್ ಅಸೋಸಿಯೇಷನ್ (ಕೆ.ವಿ.ಡಬ್ಲ್ಯೂ.ಎ) ಅಧ್ಯಕ್ಷೆಯಾಗಿ ಶ್ರೀಮತಿ ನ್ಯಾನ್ಸಿ ಮೆನೆಝೆಸ್ ಮರುಆಯ್ಕೆ |
ಪ್ರಕಟಿಸಿದ ದಿನಾಂಕ : 2008-05-19
ಡೋನಾಲ್ಡ್ ಮೆಂಡೋನ್ಸಾ ಉಪಾಧ್ಯಕ್ಷ, ರೋಷನ್ ಡಿ'ಸೋಜಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ : 2008-2010 ಅವಧಿಯ ಸಮಿತಿ ಪ್ರಕಟ
ಕುವೈಟ್, ಮೇ 19: ಕೆ.ವಿ.ಡಬ್ಲ್ಯೂ.ಎ (ಕುಂದಾಪುರ ವರಾದೋ ವೆಲ್ಫೇರ್ ಅಸೋಸಿಯೇಷನ್) ಸಂಘಟನೆಯು ತನ್ನ ವಾರ್ಷಿಕ ಸಮಾರೋಪ ಸಮಾರಂಭವನ್ನು ಕಳೆದ 16ನೇ ಮೇ ಆಚರಿಸಿಕೊಂಡಿತು. ಈ ಸಂದರ್ಭದಲ್ಲಿ 2008-2010 ದ್ವೈವಾರ್ಷಿಕ ಅವಧಿಯ ಸಮಿತಿಯನ್ನು ನೇಮಕ ಮಾಡಿಕೊಳ್ಳಲಾಯಿತು.
ಕಾರ್ಯಕ್ರಮವು ಶ್ರೀಮತಿ ಸುನೀತಾ ಮೆಂಡೋನ್ಸಾರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಬರುವ ದ್ವೈವಾರ್ಷಿಕ ಅವಧಿಯ ಹೊಸ ಸಮಿತಿಯ ನೇಮಕದ ಮುನ್ನುಡಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಆ ಬಳಿಕ ಕಳೆದ 2007-08ರ ಅವಧಿಯ ವಾರ್ಷಿಕ ವರದಿಯನ್ನು ಅಧ್ಯಕ್ಷೆ ಹಾಗೂ ಖರ್ಚುವೆಚ್ಚಗಳ ವಿವರಗಳನ್ನು ಖಜಾಂಚಿಗಳು ಸಭೆಯಲ್ಲಿ ಮಂಡಿಸಿದರು. ಈ ಖರ್ಚುವೆಚ್ಚಗಳನ್ನು ಲೆಕ್ಕಪರಿಶೋಧಕರು ಪರಿಶೀಲಿಸಿ ಅನುಮೋದಸಿದರು. ಕಳೆದ ಅವಧಿಯಲ್ಲಿ ತಮಗೆ ನೀಡಿದ ಸಹಕರಕ್ಕಾಗಿ ಹಾಗೂ ಸಂಘದ ಕಾರ್ಯಕಲಾಪಗಳು ಸುಗಮವಾಗಿ ನಡೆಸಿಕೊಂಡು ಹೋಗುವಲ್ಲಿ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷೆ ತಮ್ಮ ಧನ್ಯವಾದ ಅರ್ಪಿಸಿದರು.
ಅ ಬಳಿಕ ಹೊಸ ಸಮಿತಿಯ ನೇಮಕ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಿ ಒಂದೇ ಕುಟುಂಬದ ಸದಸ್ಯರು ಒಂದೆಡೆ ಕೂಡಿದ ಅನುಭವವಾಯಿತು. ಕಳೆದ ವರ್ಷ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಶ್ರೀಮತಿ ನ್ಯಾನ್ಸಿ ಮೆಂಡೋನ್ಸಾ ರವರನ್ನು ಅಧ್ಯಕ್ಷೆಯಾಗಿ ಮರುಆಯ್ಕೆ ಮಾಡಲಾಯಿತು.
ಸಮಿತಿಯ ಇತರ ಸದಸ್ಯರ ವಿವರಗಳು ಈ ಕೆಳಗಿನಂತಿವೆ:
Nancy Menezes -President Donald Mendonca -Vice President Christopher Dias- Auditor Romel D'Souza -Treasurer Rainer Crasta -Asst. Treasurer Roshan D'Souza -General Secretary Sunitha Mendonca- Asst. General Secretary Carol Martis -Public Relations/Media Veena Lewis -Cultural Secretary Nelson Mendonca -Asst. Cultural Secretary Canute Roche -Coordinator-Poor Children's Education Navin Victor Mendonca -Asst. Coordinator-Poor Children's Education Sunil Arther Rodrigues -Incharge Members Affairs Mohan Fernandes- Executive Committee Member Micheal Oswald Dias -Executive Committee Member Mathias Saldanha -Executive Committee Member Wilson George Plavia- Executive Committee Member Mergin Dias -Executive Committee Member Henry Lewis -Executive Committee Member Nelson Oliveira -Executive Committee Member
ಶ್ರೀಮತಿ ಮೆಂಡೊನ್ಸಾರವರು ಬೇರೊಬ್ಬರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಇಚ್ಛಿಸಿದರೂ ಎಲ್ಲಾ ಸದಸ್ಯರ ಒಕ್ಕೊರಲಿನ ಬೇಡಿಕೆಯ ಮುಂದೆ ತಲೆಬಾಗಲೇ ಬೇಕಾಯಿತು. ಹೊಸ ಸಮಿತಿಯು ಮುಂದಿನ ಅವಧಿಯಲ್ಲಿ ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತನ್ಮೂಲಕ ಸಂಘದ ಹಾಗೂ ಸಮಾಜದ ಸೇವೆ ಸಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದರು.
ಮುಂದಿನ ಅವಧಿಯಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ವಿಚಾರವಿನಿಮಯ ನಡೆದು ಆ ಪ್ರಕಾರ ನಡೆದುಕೊಳ್ಳುವುದಾಗಿ ಸದಸ್ಯರು ಭರವಸೆಯಿತ್ತರು.
ಸುಮಾರು ಹನ್ನೊಂದು ಮುಕ್ಕಾಲರವರೆಗೂ ನಡೆದ ಸಂತಸದಿಂದ ಕೂಡಿದ ಕಾರ್ಯಕ್ರಮ ರೋಷನ್ ಡಿ'ಸೋಜಾರವರ ವಂದನಾರ್ಪಣೆಯೊಂದಿಗೆ ಸಮಾಪ್ತಿ ಕಂಡಿತು.
ವರದಿಯ ವಿವರಗಳು |
 |
ಕೃಪೆ : ಕೆ.ವಿ.ಡಬ್ಲ್ಯೂ.ಎ. ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-05-19
|
|
|