ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ದೋಹಾ: ಕಾರ್ಮಿಕರಿಗೆ ಉಚಿತ ವೈದ್ಯಕೀಯ ಸೇವಾಶಿಬಿರ : ಅಪಾರ ಜನಸ್ತೋಮ

ಇಂಡಿಯನ್ ಅಸೋಸಿಯೇಶನ್ ಕತರ್ ಆಯೋಜಿಸಿದ್ದ ಆರೋಗ್ಯ ಶಿಬಿರ : ನಾಲ್ಕು ಸಾವಿರಕ್ಕೂ ಹೆಚ್ಚು ಜನರ ಆಗಮನ

ದೋಹಾ, ಏಪ್ರಿಲ್ 26: ಜಮಾತೆ ಇಸ್ಲಾಮಿ ಹಿಂದ್ (ಕೇರಳ)ದ ಅಂಗವಾಗಿರುವ ಇಂಡಿಯನ್ ಅಸೋಸಿಯೇಷನ್ ಕತರ್ (ಐ‌ಐ‌ಎಕ್ಯೂ) ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕತರ್ ಜಂಟಿಯಾಗಿ ಆಯೋಜಿಸಿದ್ದ 7ನೇ ವಾರ್ಷಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ ನಿನ್ನೆ 25ನೇ ಏಪ್ರಿಲ್ ಶುಕ್ರವಾರದಂದು ಜಿದಾಫ್ ಫ್ಲೈ‌ಓವರ್ ಬಳಿ ಇರುವ ಬಾಯ್ಸ್ ಪ್ರಿಪರೇಟರಿ ಶಾಲೆಯ ಆವರಣದಲ್ಲಿ ಏರ್ಪಡು ಮಾಡಲಾಗಿತ್ತು.  ಈ ಶಿಬಿರವು ನ್ಯಾಶನಲ್ ಹೆಲ್ತ್ ಆಥಾರಿಟಿ (ಎನ್.ಹೆಚ್. ಎ.) ಹಾಗೂ ಹಮದ್ ಮೆಡಿಕಲ್ ಕಾರ್ಪೋರೇಶನ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜರುಗಿಸಲಾಗಿತ್ತು. ಕ್ಯೂಟೆಲ್ ಈ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕಾ ಸಂಸ್ಥೆಯಾಗಿದೆ.

ಕತರ್ ನಲ್ಲಿಯೇ ಉನ್ನತ ಕಾರ್ಯಕ್ರಮವಾದ ಈ ಶಿಬಿರ ಬೆಳೆಗ್ಗೆ 8:30ಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ಡಾ. ಮೈಕಲ್ ಕೆವಿನ್ ವಾಲ್ಷ್ (ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕರು, ನ್ಯಾಶನಲ್ ಹೆಲ್ತ್ ಆಥಾರಿಟಿ), ಶ್ರೀ ಆದೆಲ್ ಮುತಾವಾ( ಅಧ್ಯಕ್ಷರು, ಕ್ಯೂಟೆಲ್), ಡಾ. ಹನಾನ್ ಅಲ್ ಕುವಾರಿ (ನಿರ್ವಾಹಕ ನಿರ್ದೇಶಕರು, ಹೆಚ್.ಎಮ್.ಸಿ) ರವರಿಂದ ಉದ್ಘಾಟನೆ ಕಂಡಿತು.  ಎಂದಿನಂತೆ ಪವಿತ್ರ ಕುರಾನ್ ಪಠಣದೊಂದಿಗೆ ಪ್ರಾರಂಭವಾದ ಸರಳ ಕಾರ್ಯಕ್ರಮ ಇಂಡಿಯನ್ ಇಸ್ಲಾಮಿಕ್ ಅಸೋಸಿಯೇಷನ್ ಅಧ್ಯಕ್ಷರಾದ ವಿ.ಟಿ. ಅಬ್ದುಲ್ಲಾ ಕೋಯಾರವರ ಸ್ವಾಗತದೊಂದಿಗೆ ಪ್ರಾರಂಭವಾಯಿತು.  ಈ ಸಂದರ್ಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕತರ್ ವಿಭಾಗದ ಅಧ್ಯಕ್ಷರಾದ ಡಾ. ಸಮೀರ್ ಕಲಂದನ್ ಶಿಬಿರದ ಮುಖ್ಯ ಉದ್ದೇಶ ಹಾಗೂ ವಿಧಾನಗಳನ್ನು ವಿವರಿಸಿದರು. 

ಆ ಬಳಿಕ ಮಾತನಾಡಿದ ಕತರ್ ನ ಭಾರತೀಯ ರಾಯಭಾರಿ ಡಾ. ಜಾರ್ಜ್ ಜೋಸೆಫ್ ಅವರು ಇಂಡಿಯನ್ ಇಸ್ಲಾಮಿಕ್ ಅಸೋಸಿಯೇಶನ್ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸಂಸ್ಥೆಗಳ ಪದಾಧಿಕಾರಿಗಳ ಸೇವಾಮನೋಭಾವವನ್ನು ಕೊಂಡಾಡಿದರು. ಹೆಚ್ಚಿನ ವೈದ್ಯಕೀಯ ವೆಚ್ಚವನ್ನು ಭರಿಸಲಾಗದವರಿಗೆ ವರದಾನವಾದ ಈ ಶಿಬಿರಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು.

ಜನರಿಗೆ ಆರೋಗ್ಯವಂತ ಜೀವನ ನಡೆಸುವ ಮಾಹಿತಿಗಳನ್ನು ನೀಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಈ ವರ್ಷದ ಶಿಬಿರ ಮಧುಮೇಹ ರೋಗ ಹಾಗೂ ಹೈಪರ್ ಟೆನ್ಷನ್ ರೋಗಗಳಿಗೆ ಚಿಕಿತ್ಸೆ ನೀಡುವತ್ತ ಹೆಚ್ಚಿನ ಕಾಳಜಿ ವಹಿಸಿತ್ತು.  ಮಧುಮೇಹ ಹಾಗೂ ಹೆಚ್ಚಿನ ರಕ್ತದೊತ್ತಡದ ತೊಂದರೆಯಿರುವ ಕಾರ್ಮಿಕರ ಮೂತ್ರಪರೀಕ್ಷೆ, ಪ್ರೊಟೀನ್ ಮತ್ತು ಸೆರೆಟೈನ್ ಅಂಶಗಳ ತಪಾಸಣೆ ಶಿಬಿರದಲ್ಲಿದ್ದ ಪ್ರಯೋಗಾಲಯದಲ್ಲಿ ನಡೆಸಲಾಯಿತು. ಮಹಿತಿ ಹಾಗೂ ಹಣಕಾಸಿನ ತೊಂದರೆಯಿಂದ ಸೂಕ್ತ ವೈದ್ಯಕೀಯ ಸೌಲಭ್ಯ ಪಡೆಯಲಸಾಧ್ಯವಾದ ಕಾರ್ಮಿಕರಿಗೆ ಸೂಕ್ತ ಸಲಹೆಗಳನ್ನು ನೀಡಲಾಯಿತು. ಹೆಲ್ತ್ ಕಾರ್ಡ್ ಇಲ್ಲದಿರುವಿಕೆ, ಕಾನೂನಿನ ತೊಡಕು ಇತ್ಯಾದಿಗಳ ಮಾಹಿತಿಗಳನ್ನು ನೀಡಲಾಯಿತು. ಈ ಮಾಹಿತಿಗಳನ್ನು ಮಾಧ್ಯಮವಿಭಾಗ ಸಮರ್ಪಕವಾಗಿ ಇತರರಿಗೂ ತಲುಪಿಸುವ ಜವಾಬ್ದಾರಿಯನ್ನು ಎತ್ತಿ ಹಿಡಿಯಲಾಯಿತು.

ಸುಮಾರು ಎಂಟುನೂರಕ್ಕೂ ಹೆಚ್ಚು ಸ್ವಯಂಸೇವಕರು ತಮ್ಮ ಇಡಿಯದಿನವನ್ನು ಈ ಶಿಬಿರಕ್ಕಾಗಿ ಮುಡಿಪಾಗಿಸಿದ್ದು ಶ್ಲಾಘನೀಯವಾಗಿತ್ತು. ವೈದ್ಯಕೀಯ ರಂಗದ ಸುಮಾರು ಇನ್ನೂರಕ್ಕೂ ಹೆಚ್ಚು ವೈದ್ಯರು, ದಾದಿಯರು ಹಾಗೂ ಅರೆವೈದ್ಯಕೀಯ ಸೇವಾ ವ್ಯಕ್ತಿಗಳೂ ಇಡಿಯ ದಿನ ತಮ್ಮ ಸೇವೆಯನ್ನು ಸಲ್ಲಿಸಿದರು.

ಶಿಬಿರದ ಇನ್ನೊಂದು ಆಕರ್ಷಣೆಯಾಗಿ ಡೆಲ್ಲಿ ಪಬ್ಲಿಕ್ ಸ್ಕೂಲ್, ಪಾಕಿಸ್ತಾನ ಸ್ಕೂಲ್, ಬಿರ್ಲಾ ಪಬ್ಲಿಕ್ ಸ್ಕೂಲ್, ಶಾಂತಿನಿಕೇತನ ಇಂಡಿಯನ್ ಸ್ಕೂಲ್, ಎಮ್.ಇ.ಎಸ್. , ಐಡಿಯಲ್ ಇಂಡಿಯನ್ ಸ್ಕೂಲ್ ಹಾಗೂ ವೇಲ್ ಕಾರ್ನೆಲ್ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದ್ದ ವೈದ್ಯಕೀಯ ಪ್ರದರ್ಶನ ಗಮನ ಸೆಳೆಯಿತು.

ಈ ಶಿಬಿರದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಅರ್ಹ ಕಾರ್ಮಿಕರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.  ಸುಮಾರು ನೂರು ವೈದ್ಯರು ಪಾಳಿಯಲ್ಲಿ ಸೇವೆ ಸಲ್ಲಿಸಿದರು. ಬಾರತೀಯರು ಮಾತ್ರವಲ್ಲದೇ ನೇಪಾಳ, ಬಾಂಗ್ಲಾದೇಶ, ಫಿಲಿಪ್ಪೀನ್ಸಿ, ಪಾಕಿಸ್ತಾನ ಹಾಗೂ ಕಲ ಅರಬ್ ಮೂಲದ ಕಾರ್ಮಿಕರೂ ಶಿಬಿರದ ಪ್ರಂiಜನ ಪಡೆದರು.

ಐಸಿಸಿ ಪೂರ್ವ ಅಧ್ಯಕ್ಷರಾದ ಶ್ರೀ ಎಮ್.ಐ. ಫರೀದ್, ತುಳು ಕೂಟದ ಅಧ್ಯಕ್ಷರಾದ ದಿವಾಕರ್ ಪೂಜಾರಿ, ಲೀಗಲ್ ಅಡ್ವೈಜರ್ ನಜೀರ್ ಕೆ ಸಹಿತ ಹಲವು ಗಣ್ಯರು ಶಿಬಿರಕ್ಕೆ ಭೇಟಿ ನೀಡಿದರು. ಶಿಬಿರದಲ್ಲಿ ಉಚಿತ ಊಟ, ಪಾನೀಯ ಹಾಗೂ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅರ್ಹ ರೋಗಿಗಳಿಗೆ ಉಚಿತ ಔಷಧಿಗಳನ್ನೂ ವಿತರಿಸಲಾಯಿತು.

ಇಡಿಯ ದಿನ ನಡೆದ ಕಾರ್ಯಕ್ರಮದ ಅಂತಿಮ ಹಂತವಾಗಿ ಐ‌ಐ‌ಎ ಅಧ್ಯಕ್ಷರಾದ ಜುಬೈರ್ ಅಬ್ದುಲ್ಲಾ ಅವರು ವಂದನಾರ್ಪಣೆ ಅರ್ಪಿಸುವುದರೊಂದಿಗೆ ಶಿಬಿರ ಸಾರ್ಥಕ ಮುಕ್ತಾಯ ಕಂಡಿತು.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಇಕ್ಬಾಲ್ ಮನ್ನಾ
ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-04-26


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಏಷ್ಯನ್ ಒಳಾಂಗಣ ಕ್ರೀಡಾಕೂಟಕ್ಕೆ ೩೨ ಸದಸ್ಯರ ದಂಡು; ಭಾರತ ತಂಡಕ್ಕೆ ಅಂಜು ಬಾಬಿ ಜಾರ್ಜ್ ನೇತೃತ್ವ
»ಗಿನ್ನೆಸ್ ದಾಖಲೆ ಸೇರಿದ ಕತರ್ ಕೆ.ಎಫ್.ಸಿ.
»ತುಂಡಾದ ಕೇಬಲ್ : ಅಸ್ತವ್ಯಸ್ತವಾದ ಕತರ್ ಟೆಲಿಫೋನ್ ವ್ಯವಸ್ಥೆ
»ಅನಿವಾಸಿಗಳಿಂದ ಆಚರಿಸಲ್ಪಟ್ಟ ಗಣತಂತ್ರ ದಿವಸ : ಹಬ್ಬದ ವಾತಾವರಣ
»ಇನ್ನಷ್ಟು ದುಬಾರಿಯಾಗಲಿರುವ ಭಾರತದ ಅಕ್ಕಿ.
»ತಿಜೋರಿ ಕದ್ದು ಒಡೆಯಲನುವಾಗುತ್ತಿರುವಾಗಲೇ ಪೋಲೀಸರಿಗೆ ಸಿಕ್ಕಿಬಿದ್ದ ಕಳ್ಳರು
»ಜೆಟ್ ಏರ್ ವೇಸ್ ಪ್ರಾರಂಭಿಸಿರುವ ದೋಹಾ-ಮುಂಬೈ,ಕಲ್ಲಿಕೋಟೆ ನೇರ ವಿಮಾನಯಾನ
»ಉದ್ಯೋಗಕ್ಕಾಗಿ ಬಂದವರು ಒಂಟೆಕಾವಲಿಗೆ: ಭಾರತೀಯದ ಅಳಲು
»ದೋಹ: ಕರ್ನಾಟಕ ಶಾಸ್ತ್ರೀಯ ಸಂಗೀತಪ್ರಿಯರಿಗೆ ಅಪರೂಪದ ಉಪಚಾರ
»ಸಾರಿಗೆ ಕಾನೂನುಗಳ ಅನುವಾದ ಅಗತ್ಯ: ಏಶಿಯಾ ಮೂಲದ ಅನಿವಾಸಿಗಳ ಬೇಡಿಕೆ
»ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಬಂದರೆ ದಂಡ: ಕತರ್ ಸಾರಿಗೆ ಸಚಿವಾಲಯ
»ಏರುತ್ತಿರುವ ಮೊಟ್ಟೆ ಬೆಲೆ, ಆತಂಕದಲ್ಲಿ ಬೇಕರಿಗಳು.
»ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ವಿದೇಶಿಯರ ಸಂಖ್ಯೆ ೭೦ ಮಿಲಿಯನ್!
»ಡಾಲರ್ ಮೇಲಿನ ಅವಲಂಬನೆಯಲ್ಲಿ ಬದಲಾವಣೆ ಇಲ್ಲ, ಜಿಸಿಸಿ.
»ದಾನಿಗಳಿಗೆ ಸನ್ಮಾನ:(THE Indian Community Benevolent Fund (ICBF)
»ಐಸಿಸಿ ಉತ್ಸವದಲ್ಲಿ ಮನಸೆಳೆದ ಮಕ್ಕಳ ನೃತ್ಯ
»ಆಯಾಗಳ ನೇಮಕಕ್ಕೆ ತಾತ್ಕಾಲಿಕ ತಡೆಯಾಜ್ಞೆ ಇನ್ನೂ ಪ್ರಸ್ತುತ
»ಐಡಿಯಲ್ ಇಂಡಿಯನ್ ಸ್ಕೂಲ್ ವಿಧ್ಯಾರ್ಥಿ ಅಕಾಲಿಕ ಮ್ರತ್ಯು
»೧೫ ವರ್ಷ ಒಳಗಿನವರ ಕ್ರಿಕೆಟ್-ನಾಯಕತ್ವ ವಹಿಸಿದ ಮಂಗಳೂರಿನ ಬಾಲಕ
»500ಕ್ಕೂ ಹೆಚ್ಚು ಮಕ್ಕಳ ಉಚಿತ ನೇತ್ರ ತಪಾಸಣೆ
»2016ರ ಒಲಿಂಪಿಕ್ಸ್ ಕ್ರೀಡೆಗಳ ಪ್ರಯೋಜಕತೆಗೆ ಕತಾರ್ ಯತ್ನ
»೨೦ನೆ ಮಾಂಟ್ರಿಯಲ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಕತಾರ್
»ಇಪ್ಪತ್ತು ವರ್ಷ ಪೂರೈಸಿದ ಮೊಬೈಲ್ ಟೆಲಿಕಾಂ ಕಂಪನಿ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri