ಕುವೈಟ್ ವಿಶ್ವ ಕನ್ನಡ ಸಮ್ಮೇಳನ: ಸಂಭ್ರಮದ ಮುಕ್ತಾಯ |
ಪ್ರಕಟಿಸಿದ ದಿನಾಂಕ : 2007-12-03
ಕುವೈಟ್ ಡಿಸೆಂಬರ್ ೩. ರಾಷ್ಟ್ರಕವಿ ಶ್ರೀ ಜಿ.ಎಸ್. ಶಿವರುದ್ರಪ್ಪರವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಯಾಗಿದ್ದ ಪ್ರತಿಷ್ಠಿತ ಕುವೈಟ್ ವಿಶ್ವ ಕನ್ನಡ ಸಮ್ಮೇಳನವು ಇಂದು ಸಂಭ್ರದ ಮುಕ್ತಾಯ ಕಂಡಿತು. ಕುವೈಟಿನ ಅಮೇರಿಕರ್ ಇಂಟರ್ ನ್ಯಾಷನಲ್ ಶಾಲೆಯ ಅಲ್ ರಯೀಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮ್ಮೇಳವು ಕುವೈಟ್ ಕನ್ನಡ ಸಂಘ ಮತ್ತು ಕರ್ನಾಟಕದ ಹೃದಯವಾಹಿನಿ ಸಂಸ್ಥೆಗಳು ಒಗ್ಗೂಡಿ ಯಶಸ್ವಿಯಾಗಿ ನಡೆಸಿಕೊಟ್ಟವು.
ಇಂದಿನ ಕಾರ್ಯಕ್ರಮವು ಮಾನಸಿ ಪ್ರಸಾದ್ ಅವರ ಭಕ್ತಿಗೀತೆಯೊಂದಿಗೆ ತೊಡಗಿ ಎನ್ನಾರೈ ಕನ್ನಡಿಗರ ಗೋಷ್ಠಿಯೊಂದಿಗೆ ಮುಂದುವರೆಯಿತು. ಇದನ್ನು ಬಿ.ವಿ.ನಾಗರಾಜ್, ಸರ್ವೋತ್ತಮ ಶೆಟ್ಟಿ ಹಾಗೂ ಅರವಿಂದ ಪಾಟೀಲ್ ನಡೆಸಿಕೊಟ್ಟರು. ನಂತರ ಕವಿಗೋಷ್ಟಿಯಲ್ಲಿ ಅನೇಕ ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು. ಸರ್ವೋತ್ತಮ ಶೆಟ್ಟರ ಅನಿವಾಸಿ ಕನ್ನಡಿಗರ ಸಮಸ್ಯೆಗಳ ಕುರಿತು ಮಾಡಿದ ಭಾಷಣಕ್ಕೆ ಸಭಿಕರು ಚಪ್ಪಾಳೆಗಳೊಂದಿಗೆ ತಮ್ಮ ಸಂತಸ ವ್ಯಕ್ತಪಡಿಸಿದರು.
ಕರ್ನಾಟಕದ ಪ್ರಮುಖ ವ್ಯಕ್ತಿಗಳಿಗೆ ವಿಶ್ವಮಾನವ ಪ್ರಶಸ್ತಿ ನೀಡಲಾಯಿತು. ಕುವೈಟಿನಲ್ಲಿ ಭಾರತದ ರಾಯಭಾರಿಯಗಿರುವ ಶ್ರೀ ಎಂ. ಗಣಪತಿ ಹಾಗೂ ಮಾಜಿ ಭಾರತದ ಕುವೈಟ್ ರಾಯಭಾರಿಯಾದ ಶ್ರೀ ಇಶಾ ಅಲ್ ಇಶಾ ಉಪಸ್ಥಿತರಿದ್ದರು.
ಸಮ್ಮೇಳನದ್ದುದ್ದಕೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ಕುವೈಟ್ ಕನ್ನಡ ಕೂಟದ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು. ಶ್ರಿರಸಿಯ ಮಂಜುಶ್ರೀ , ಮೇಘನಾ ರವರಿಂದ ಕೂಚಿಪುಡಿ, ಕಲಾನಿಕೇತನ ಭರತನಾಟ್ಯಂ ಶಾಲೆ, ಮಾಲೂರು ಇವರಿಂದ ನೃತ್ಯ, ಮಾನಸಿ ಪ್ರಸಾದ್ ಅವರಿಂದ ನೃತ್ಯರೂಪಕ, ಶಿರಸಿಯ ನಾಟ್ಯಾಂಜಲಿ ಕಲಾಶಾಲೆ ಹಾಗೂ ಬೆಂಗಳೂರಿನ ಕಿಂಕಿಣಿ ತಂಡದವರಿಂದ ನೃತ್ಯಗಳು, ಮಕ್ಕಳಿಂದ ಯಕ್ಷಗಾನ, ಮತ್ತು ಕುವೈಟ್ ಕನ್ನಡ ಕೂಟದ ಸದಸ್ಯರಿಂದ ಶ್ರೀನವಾಸ ಕಲ್ಯಾಣ ನಾಟಕ ಪ್ರದರ್ಶಿತಗೊಂಡವು. ಮಕ್ಕಳ ಯಕ್ಷಗಾನ ಆಕರ್ಶಕವಾಗಿತ್ತು.
ಶ್ರೀ ವೀರೇಂದ್ರ ಬಾಬು ಅವರು ವಂದನಾರ್ಪಣೆ ಅರ್ಪಿಸಿದರು. ಸ್ವಾದಿಷ್ಟ ರಸದೌತಣದೊಂದಿಗೆ ಸಂಭ್ರಮದ ಮುಕ್ತಾಯ ಹಾಡಲಾಯಿತು.
ವರದಿಯ ವಿವರಗಳು |
 |
ಕೃಪೆ : daijiworld.com ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-03
|
|
|