ವಿಜಯ್ ರೈ ಅವರು ಕೆಡಬ್ಲ್ಯೂಎಆರ್ ನ ಅಧ್ಯಕ್ಷರಾಗಿ ಪುನರ್ ಆಯ್ಕೆ |
ಪ್ರಕಟಿಸಿದ ದಿನಾಂಕ : 2009-05-18
ರಿಯಾದ್ ,ಮೇ,17: ವಿಜಯ್ ರೈ ಅವರು ಯಾವುದೇ ತಾರತಮ್ಯವಿಲ್ಲದೆ ‘ಕರಾವಳಿ ವೆಲ್ ಫೇರ್ ಅಸೋಸಿಯೇಶನ್ ರಿಯಾದ್’ ಇದರ ಅಧ್ಯಕ್ಷರಾಗಿ ಪುನರ್ ಆಯ್ಕೆಗೊ೦ಡರು. ಮೇ, 15, ಶುಕ್ರವಾರದ೦ದು ರಿಯಾದ್ ನ ಹಾಫ್ ಮೂನ್ ಹಾಲ್ ನಲ್ಲಿ ಸಾಮಾನ್ಯ ಸಭೆಯಲ್ಲಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಶ್ರೀ ಪಿ .ಎ೦.ಪ್ರಭಾಕರ್ ಅವರು ಎಲ್ಲ ಸದಸ್ಯರನ್ನು ಸ್ವಾಗತಿಸಿದರು.ಶ್ರೀ ವಿಜಯ್ ರೈ ಮತ್ತು ಶ್ರೀ ಕಾಸಿ೦ ಅಹಮ್ಮದ್ ಅವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀ ಅಬ್ದುಲ್ ಹಮೀದ್ ವೆ೦ಜ್ ಮತ್ತು ಶ್ರೀ ಅಮ್ಬ್ರೋಸ್ ಡಿ ’ಮೆಲ್ಲೊ ಅವರು ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ಸುಗಮವಾಗಿ ನೆರವೇರಿಸಿದರು.
2009-10 ನೇ ಸಾಲಿನ ಪದಾಧಿಕಾರಿಗಳು ಈ ಕೆಳಗಿನ೦ತಿವೆ.
ಅಧ್ಯಕ್ಷರು -ಶ್ರೀ ವಿಜಯ್ ರೈ, ಉಪಾಧ್ಯಕ್ಷರು- ಶ್ರೀ ಕಾಸಿ೦ ಅಹಮ್ಮದ್, ಸಾಮಾನ್ಯ ಕಾರ್ಯದರ್ಶಿ- ಶ್ರೀ ರಾಯ್ ಸ್ಟೊನ್ ಪ್ರಭು, ಸಹ ಕಾರ್ಯದರ್ಶಿ- ಶ್ರೀ ರಮೇಶ್ ಶೆಟ್ಟಿ, ಪಬ್ಲಿಕ್ ರಿಲೇಶನ್ ಆಫೀಸರ್-ಶ್ರೀ ಪರ್ ವೇಜ್ ಅಲಿ, ಇ೦ಟರ್ನಲ್ ಅಡಿಟರ್-ಶ್ರೀ ನೆಲ್ಸ ನ್ ಡಿ’ಸೋಜಾ, ಖಜಾ೦ಚಿ-ಶ್ರೀ ಜಯ೦ತ್ ಸಾಲಿಯಾನ್, ಸಹಾಯಕ ಕಾರ್ಯದರ್ಶಿ- ಶ್ರೀ ರಫಿ ಅಹಮ್ಮದ್ ಅಲಿ, ಸಹಾಯಕರಾಗಿ- ಶ್ರೀ ರಾಜೇಶ್ ಕುಮಾರ್ ಮತ್ತು ಶ್ರೀ ಇಫ್ತಿಕಾರ್ ಅಹಮ್ಮದ್, ಸಾ೦ಸ್ಕ್ರತಿಕ ಕಾರ್ಯದರ್ಶಿ- ಶ್ರೀ ಅರುಣ್ ಡಿ’ಸೋಜಾ, ಸಹಾ ಯಕ ಸಾ೦ಸ್ಕ್ರತಿಕ ಕಾರ್ಯದರ್ಶಿ- ಶ್ರೀ ಮಹದೇವ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ-ಶ್ರೀ ಪ್ರಕಾಶ್ ಶೆಟ್ಟಿ, ಸಹಾಯಕ ಕ್ರಿಡಾ ಕಾರ್ಯದರ್ಶಿ- ಶ್ರೀ ಅಬ್ಧುಲ್ ಅಜೀಜ್ ಬ೦ಕಲ್, ನಿರ್ವಾಹಕರಾಗಿ-ಶ್ರೀ ಅಬ್ಧುಲ್ ಹಮೀದ್ ವೆ೦ಜ್, ಶ್ರೀ ಮೊಹದ್ ನವಾಜ್ ಮತ್ತು ಶ್ರೀ ಎರಿಕ್ ಡಿ’ಸಾ.
Executive Committee for 2009-10:
Mr. Hussain Shafi, Mr. P.M. Bhaskar, Mr. Victor Menezes, Mr. Alfred Fernandes, Mr. Leo Sequeira, Mr. Suresh Suvarna, Mr. Mohd Ashraf, Mr. Prasanna Rao, Mr. P.M. Haneef, Mr. Mohammed Ballacher
ಮ೦ಗಳೂರಿನ೦ದ ಸೌದ್ ಅರೇಬಿಯಾಕ್ಕೆ ನೇರ ವಿಮಾನಯಾನವನ್ನು ಆರ೦ಭಿಸುವುದು ಕೆಡಬ್ಲ್ಯೂಎಆರ್ ನ ಕನಸು.ಇದನ್ನು ನೆರವೇರಿಸುವುದೇ ಇದರ ಮುಖ್ಯ ಗುರಿಯಾಗಿ ದೆ.ಅಗತ್ಯವಿರುವವರಿಗೆ ಸಹಾಯ ಮಾಡುವುದು, ಟ್ರಸ್ಟ್ ನವರಿಗೆ ಹಣವನ್ನು ದಾನವಾಗಿ ನೀಡುವುದು,ರಿಯಾದ್ ನಲ್ಲಿ ಸಾ೦ಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕ್ಕೊಳ್ಳುವುದು ಇನ್ನತರ ಗುರಿಗಳಾಗಿವೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-05-18
|
|
| Vijay Suvarna, Qatar | 2009-05-24 | | ಜೆಟ್ ಏರ್ ವೇಸ್ ನವರು ಸೌದಿ - ಮುಂಬಯಿ - ಮಂಗಳೂರು ಮಧ್ಯೆ ಹಾರಾಟ ನಡೆಸಲು ಆರಂಭಿಸುವ ಸುದ್ದಿ ನಿಜವಾಗಿದ್ದಲ್ಲಿ ಇದು ನಿಜಕ್ಕೂ ಅತ್ಯಂತ ಸಂತಸದ ಸುದ್ದಿಯಾಗಿದೆ. ಸೌದಿ ವಾಸಿಗಳಾದ ಕರ್ನಾಟಕದ ಬಂಧುಗಳೆಲ್ಲರಿಗೂ ಇ ಸುಸಂದರ್ಭದಲ್ಲಿ ಹ್ರತ್ಪೂರ್ವಕ ಅಭಿನಂದನೆಗಳು.
ಇತರ ಕೊಲ್ಲಿರಾಷ್ಟ್ರಗಳಿಂದಲೂ ಮಂಗಳೂರಿಗೆ ವಿಮಾನ ಹಾರಾಟದ ಸೌಲಭ್ಯ ಒದಗಿಸುವ ಏರ್ಪಾಡು ಮಾಡಬೇಕೆಂದು ಜೆಟ್ ಏರ್ ವೇಸನ್ನು ಕಳಕಳಿಯಿಂದ ವಿನಂತಿಸುತ್ತೇನೆ. ಒಂದುವೇಳೆ ಜೆಟ್ ಮಂಗಳೂರಿಗೆ ತನ್ನ ಯಾನ ಆರಂಬಿಸಿದರೆ ಸಧ್ಯಕ್ಕೆ ಹಾರಾಟನಡೆಸುತ್ತಿರುವ ಸರಕಾರೀ ಸಾಮ್ಯದ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಏಕ ಮತೀಯ ಧೋರಣೆ ಅಥವಾ ಏಕ ಪಕ್ಷೀಯ ಸಾರ್ವಭೌಮತ್ವಕ್ಕೆ ಕಡಿವಾಣ ಬೀಳಬಹುದು. ದಯವಿಟ್ಟು ಜೆಟ್ ಏರ್ ವೇಸ್ ಅಥವಾ ವಿಜಯ ಮಲ್ಯರ ಕಿಂಗ್ ಫಿಷರ್ ಮಂಗಳೂರಿಗೆ ಯಾನ ಆರಂಭಿಸಲು ಉತ್ಸಾಹ ತೋರಿದರೆ ನಿಜಕ್ಕೂ ಕೊಲ್ಲಿರಾಷ್ಟ್ರಗಳಲ್ಲಿ ದುಡಿಯುತ್ತಿರುವ ಅವಿಭಜಿತ ದ. ಕ. ಜಿಲ್ಲೆಯ ಜನತೆಗೆ ಸರಾಳವಾಗಿ ಸುಗಮವಾಗಿ ಪ್ರಯಾಣಬೆಳೆಸಬಹುದು. |
| Arun D'Souza, Palimar | 2009-05-22 | | ಮಾನ್ಯರೇ.. Gulfkannadiga.com ಗೆ ನನ್ನ ದನ್ಯವಾದಗಳು. . ತಾವು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ವಾರ್ತೆ ಸಮಂಜಯ. ನಾವು ಗಲ್ಫ ರಾಷ್ಟ್ರದಲ್ಲಿ ಅತೀ ದೊಡ್ಡ ದೇಶ ವೆನಿಸಿದ ಸೌದಿ ಅರೇಬಿಯದಲ್ಲಿ ’ನೇರ ವಿಮಾನ ಯಾತ್ರೆ’ಗೆ ಅಭಿಯಾನ ಮಾಡಿದ ಕೀರ್ತಿ ’ KWAR’ ಗೆ ಸಲ್ಲುತ್ತದೆ. ಇಂದು Jet Airways June 14 ರಿಂದ Mumbai - Mangalore ಗೆ ಹಾರಾಟ ಮಾಡಲು ಮುಂದಾಗಿದೆ.{ಕ್ವಾರ್ ಗೆ ಶುಭಾಶಯಗಳು. ನಮಗೂ ವರದಿ ಕಳುಹಿಸುತ್ತಾ ಇರಿ { beeji2001@yahoo.com} |
|