ಕುವೈತ್ ಕನ್ನಡಕೂಟ - ಚಿತ್ರಕಲಾ ಸ್ಪರ್ಧೆ |
ಪ್ರಕಟಿಸಿದ ದಿನಾಂಕ : 2009-05-14
ರಜತಮಹೋತ್ಸವದ ಸಂಭ್ರಮವನ್ನಾಚರಿಸುತ್ತಿರುವ ಕುವೈತ್ ಕನ್ನಡಕೂಟ ಈ ಸವಿ ನೆನಪನ್ನು ಮತ್ತಷ್ಟು ಮೆರುಗುಗೊಳಿಸಲು ಕುವೈತ್ನಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಭಾರತೀಯ ಚಿತ್ರಕಲಾ ಪ್ರತಿಭೆಗಳಿಗೆ ‘ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆ’ ಯನ್ನು ಇದೇ ಕಳೆದ ಮೇ ೦೮, ೨೦೦೯ ರ ಶುಕ್ರವಾರ ಸ್ಥಳೀಯ ‘ಕಾರ್ಮೆಲ್ ಸ್ಕೂಲ್’ ಸಭಾಂಗ ಣದಲ್ಲಿ ನೆರವೇರಿತು.
ಕನ್ನಡನಾಡಿನ ಅಪ್ರತಿಮ ಕಲಾದಿಗ್ಗಜ, ತೈಲವರ್ಣ ಚಿತ್ರಕಲೆಯ ಕಲಾಪಿನೀ, ವಿಶ್ವವಿ ದ್ಯಾಲಯ ಲಲಿತ ಕಲಾಕಾಲೇಜು ದಾವಣಗೆರೆಯ ನಿವೃತ್ತ ಪ್ರಾಂಶುಪಾಲ ಪ್ರೋ. ವಿ.ಬಿ. ಹಿರೇಗೌಡರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜೊತೆಗೆ ನೃತ್ಯ ಮಂದಿರ ‘ಇಂಡಿ ಯನ್ ಕ್ಲಾಸಿಕಲ್ ಆರ್ಟ್’ ಮತ್ತು ವೃದ್ಧ ಹಾಗೂ ಬುದ್ದಿಮಾಂದ್ಯ ಮಹಿಳೆಯರ ಆಶ್ರಮ ‘ನಮ್ಮ ಮನೆ’ ಯ ಸ್ಥಾಪಕ ನಿರ್ದೇಶಕಿ, ಸುಪ್ರಸಿದ್ಧ ನೃತ್ಯ ಕಲಾವಿದೆ, ನೃತ್ಯ ನಿರ್ದೇಶಕಿ, ದೂರದರ್ಶನ ನಟಿ, ರೂಪದರ್ಶಿ, ಬಹುಮುಖ ಪ್ರತಿಭೆ ಕುಮಾರಿ ರೂಪಾ ಆಯ್ಯರ್ ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿದ್ದರು.

‘ ನೃತ್ಯ ದ್ಯಾನ ಸ್ಕೂಲ್ ಆಫ್ ಡ್ಯಾನ್ಸ್’ ವಿದ್ಯಾರ್ಥಿನಿಯರ ಪ್ರಾರ್ಥನಾ ನೃತ್ಯದೊಂದಿಗೆ ದಿನದ ಕಾರ್ಯಕ್ರಮ ಶುಭಾರಂಭಗೊಂಡಿತು. ಅಧ್ಯಕ್ಷ ಶ್ರೀ ನಕ್ರೆ ಸತೀಶ್ಚಂದ್ರ ಶೆಟ್ಟಿ ಕೂಟ ದ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿ ಸಿದರು. ಕುವೈಟಿನ ಪ್ರಖ್ಯಾತ ನೃತ್ಯ ನಿರ್ದೇಶಕಿ ಶ್ರೀಮತಿ ಸುಜಾತ ರಾಜೇಂದ್ರನ್, ಪ್ರೊ. ವಿ. ಬಿ. ಹಿರೇಗೌಡರ್, ಕುಮಾರಿ ರೂಪಾ ಅಯ್ಯರ್ ಈ ಸಮಯದಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಶ್ರೀ ನಕ್ರೆ ಸತೀಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಅತಿಥಿ ಪ್ರೊ.ಹಿರೇಗೌಡರ್ ತಮ್ಮ ಮಾತುಗಳಲ್ಲಿ ರಜತಮಹೋತ್ಸವವನ್ನು ಆಚರಿಸುತ್ತಿರುವ ಕೂಟದ ಸಾಧನೆ ಯನ್ನು ಶ್ಲಾಘಿಸಿದರು. ಕೂಟದ ಸಂಚಿಕೆ ‘ಮರಳ ಮಲ್ಲಿಗೆ’ಯ ದ್ವಿತೀಯ ಆವೃತಿ ‘ಜ್ಞಾನ ದೀವಿಗೆ’ಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಚಿತ್ರಕಲಾ ಸ್ಪರ್ಧೆಯನ್ನು ಶ್ರೀ ಏಕನಾಥ ವರ್ಣೇಕರ್ ಸಂಯೋಜಿಸಿದರು. ಪ್ರೋ. ಹಿರೇ ಗೌಡರ್ ನೆರೆದ ಸಭಿಕರಿಗೆ ಚಿತ್ರಕಲೆಯ ಮಾಹಿತಿ ನೀಡುತ್ತಾ, ಅತೀ ಶೀಘ್ರವಾಗಿ ಚಿತ್ರ ಬಿಡಿಸುವ ವಿಧಾನವನ್ನು ತೋರಿಸಿ ಕೊಟ್ಟರು. ಕುಮಾರಿ ರೂಪಾ ಆಯ್ಯರ್ ನಟಿಸಿ, ನಿರ್ದೇಶಿಸಿದ ಸಾಕ್ಷಚಿತ್ರ ‘ಮುಖಪುಟ’ವನ್ನು ಪ್ರದರ್ಶಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ನೃತ್ಯ ದ್ಯಾನ ಸ್ಕೂಲ್ ಆಫ್ ಡ್ಯಾನ್ಸ್’ ಇದರ ನೃತ್ಯ ಪಟುಗಳ ರಂಗು ರಂಗಿನ ನೃತ್ಯ ಪ್ರದರ್ಶನ, ಕೂಟದ ಪ್ರತಿಭೆಗಳ ಗಾಯನದಿಂದ ಸಭಿ ಕರಿಗೆ ಮನೋರಂಜನೆ ನೀಡಿತು. ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಹಾಗೂ ಮರಳಮಲ್ಲಿಗೆಯ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಶ್ರೀಮತಿ ಶಶಿಕಲಾ ರಮೇಶ್, ಕುಮಾರಿ ಅನಿತಾ ವರ್ಣೆಕರ್, ಶ್ರೀ ಸುರೇಶ್ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಶ್ರೀ ಸಂತೋಷ ಕುಲಕರ್ಣಿ ವಂದಿಸಿದರು.
ವರದಿಯ ವಿವರಗಳು |
 |
ಕೃಪೆ : ಮೋಹನ್ ದಾಸ್ ಕಾಮತ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-05-14
|
|
|